ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಬೋವಿಕಾನದ 10ನೇ ತರಗತಿ ವಿದ್ಯಾರ್ಥಿನಿ ಶುಹೈಲಾ ನಿಗೂಢ ಸಾವಿನ ಪ್ರಕರಣದ ಆರೋಪಿಯನ್ನು ಹಿಡಿಯಲಾಗದೆ ಪೊಲೀಸರು ತಡಕಾಡುತ್ತಿದ್ದಾರೆ. ಶುಹೈಲಾಗೆ ಕಿರುಕುಳ ನೀಡಿದ ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದೇ ವೇಳೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲು ಕ್ರಿಯಾ ಸಮಿತಿ ಸಿದ್ಧತೆ ನಡೆಸಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯ ಹಿಂದಿನ ದಿನ ಅಂದರೆ ಮಾರ್ಚ್ 30ರಂದು ಶುಹೈಲಾ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮರುದಿನವೇ ಅಡೂರು ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದು, ಸಾವು ಅನುಮಾನಾಸ್ಪದವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಇದುವರೆಗೂ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಶುಹೈಲಾ ಸಾವನ್ನಪ್ಪಿ ಮೂರು ತಿಂಗಳು ಕಳೆದರೂ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗಿದ್ದರಿಂದ ಕ್ರಿಯಾ ಸಮಿತಿ ರಚಿಸಲಾಗಿದ್ದು, ಬರುವ 13 ಮತ್ತು 14 ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ಕ್ರಿಯಾ ಸಮಿತಿ ಮುಂದಾಗಿದೆ. ಕ್ರಿಯಾ ಸಮಿತಿಯು ಪ್ರತಿಭಟನೆಯ ಸಂಕೇತವಾಗಿ ಬೋವಿಕಾನಂ ಪಟ್ಟಣಕ್ಕೆ ಮೆರವಣಿಗೆಯನ್ನು ಸಹ ಆಯೋಜಿಸಿದೆ. ಕೆಲ ಯುವಕರು ಶುಹೈಲಾ ಅವರಿಗೆ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂಬುದಕ್ಕೆ ಮನೆಯವರು ಧ್ವನಿ ಸಂದೇಶಗಳನ್ನು ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆ ಶುಹೈಲಾ ಸ್ನೇಹಿತರು ಗೌಪ್ಯ ಹೇಳಿಕೆಯನ್ನೂ ನೀಡಿದ್ದಾರೆ. ಅಡೂರು ಪೊಲೀಸರ ನಿಧಾನಗತಿಯನ್ನು ಉಲ್ಲೇಖಿಸಿ ಕುಟುಂಬದವರು ಡಿವೈಎಸ್ಪಿಗೂ ದೂರು ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.