ಆರೋಪಿಗಳ ವಿರುದ್ಧ UAPA ಕೇಸ್ ದಾಖಲಿಸಿ NIA ತನಿಖೆ ನಡೆಯಲಿ, ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಅಧ್ಯಕ್ಷ ಹಮೀದ್ ಕುತ್ತಮಟ್ಟೆ ಆಗ್ರಹ
ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕಳಂಜ ಗ್ರಾಮದಲ್ಲಿ ಎಂಟು ಮಂದಿಯ ದುಷ್ಕರ್ಮಿಗಳ ತಂಡ ಮಸೂದ್ ಎಂಬ ಯುವಕನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಇದೀಗ ಬಾಳಿ ಬದುಕಬೇಕಾದ ಯುವಕ ಮೃತಪಟ್ಟಿದ್ದು ಘಟನೆಗೆ ಸುಳ್ಯ ಯೂತ್ ಕಾಂಗ್ರೆಸ್ ತೀವ್ರ ಖಂಡನೆಯನ್ನು ವ್ಯಕ್ತಪಡಿಸುತ್ತದೆ ಎಂದು ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮಟ್ಟೆ ತಿಳಿಸಿದ್ದಾರೆ. ಹಾಗೂ ಆರೋಪಿಗಳ ವಿರುದ್ಧ UAPA ಕೇಸ್ ದಾಖಲಿಸಿ NIA ಸಂಸ್ಥೆ ತನಿಖೆ ನಡೆಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಅತ್ಯಂತ ಶೀಘ್ರದಲ್ಲಿ ಬಂಧಿಸಿದ್ದು ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು.ಹಾಗೂ ಈ ಕೊಲೆಯ ಹಿಂದಿರುವ ಎಲ್ಲಾ ಷಡ್ಯಂತರಗಳನ್ನು ಬಯಲಿಗೆಳೆದು ಸೂತ್ರದಾರಿಗಳನ್ನು ಕೂಡ ಪತ್ತೆ ಹಚ್ಚಬೇಕೆಂದು ಹಮೀದ್ ಕುತ್ತಮೊಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.