ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರವರು ಹೇಳಿರುವಂತೆ ಜೀವನ ಪದ್ಧತಿಯನ್ನು ಅಳವಡಿಸಿದರೆ ಆರೋಗ್ಯ ಹಾಗೂ ನೆಮ್ಮದಿಯ ಜೀವನ ಸಾಧ್ಯವಾಗಿದ್ದು, ಇತ್ತೀಚಿಗಿನ ಆಹಾರ ಪದ್ಧತಿಯಿಂದ ಜನರು ಬೇರೆ ಬೇರೆ ರೀತಿಯ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಅರಫಾ ಜುಮಾ ಮಸೀದಿ ಪರ್ಲಿಯ ಖತೀಬರಾದ ದಾವೂದ್ ಹನಿಫಿ ಅಡ್ಡೂರು ಅವರು ಹೇಳಿದರು.
ಅರಫಾ ಜುಮಾ ಮಸೀದಿ ಪರ್ಲಿಯ ಬಿ.ಸಿ ರೋಡ್ ನಲ್ಲಿ ನಡೆದ ಆದ್ಯಾತ್ಮಿಕ ಮಜ್ಲಿಸ್ ನ್ನೂರಿನಲ್ಲಿ ಮಾತನಾಡುತ್ತಿದ್ದ ಅವರು, ಅತೀ ಹೆಚ್ಚು ನಿದ್ರೆ ಮತ್ತು ಕೆಲಸ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಪ್ರವಾದಿ (ಸ.ಅ )ಅಂದು ಹೇಳಿದ್ದ ಜೇನು ತುಪ್ಪ, ಖರ್ಜುರ, ಶುದ್ಧ ತುಪ್ಪ ಇದೆಲ್ಲಾ ಆರೋಗ್ಯಕ್ಕೆ ಒಳ್ಳೆಯದು. ಇಂದು ಇದೆಲ್ಲಾ ವೈಜ್ಞಾನಿಕವಾಗಿ ಸಾಬೀತಾಗಿದೆ. ಸಣ್ಣ ಮಕ್ಕಳನ್ನು ಯಾವತ್ತೂ ಕರಿದ ಹಾಗೂ ಫಾಸ್ಟ್ ಫುಡ್ ತಿನಿಸಿಗಳಿಂದ ದೂರ ಮಾಡಿ ಆದಷ್ಟು ಆರೋಗ್ಯಕರ ಆಹಾರ ಹಣ್ಣು ಹಂಪಲು, ಖರ್ಜುರ ದಂತಹ ದನ್ನು ನೀಡಬೇಕು ಎಂದು ಆರೋಗ್ಯ ಮತ್ತು ಜೀವನ ಶೈಲಿಯ ಬಗ್ಗೆ ವಿವರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.