ಗುಮ್ಮಾಗಿ ಮಲಗಿದಾಗ ಕಾನನದ ಕಡೆ ಕರೆದೊಯ್ಯುವರು ನಾನು ಅನರ್ಘ್ಯನಾದರೆ, ಭಯವನ್ನು ಗಣಿಸದೆ ಖಬರ್ ಸೇರುವಾಗ ನನ್ನ ಪಾಲಿನ ಘೋರಿ ನಂದನವನವಾದಿತು
ನನ್ನ ಬದುಕಿನ ನಿತ್ಯ ದಾರಿಯಲ್ಲಿ ಎಲ್ಲರಂತೆ ನಾನೂ ಒಬ್ಬ ದಾರಿಹೋಕ ಕೆಲವರ ಸಂಗಡಿಗ ಆಲದ ಮರದ ತಪ್ಪಲಿನಲ್ಲಿ ಅವರು ಸೇರುವ ಸಭೆಗೆ ಗೈರಾದರೆ, ಚಪ್ಪಡಿಕಲ್ಲುಗಳಡಿಯಲ್ಲಿ ಬಂಧಿಯಾದ ನಾನು ಅವರ ಪಾಲಿಗೆ ಅಗಲಿದವನು
ಅವರು ಸಭೆಗಳಲ್ಲಿ ನನ್ನನ್ನು ಸ್ಮರಿಸುವರು ನನ್ನ ಜೀವನದ ಭೂಷಣ,ಕಿಮ್ಮತ್ತನ್ನು ಬಸವಣ್ಣನವರ ನುಡಿಯಲ್ಲಿ ಬಣ್ಣಸಿದರೆ, ಅವರು ನುಡಿಸಿದಷ್ಟು ನಾನು ಸಗ್ಗ ಸೇರುತ್ತಿರುವೆ ತೀರಿದಾಗ ಹತ್ತು ಮಂದಿ ಉತ್ತಮನೆಂದು ನುಡಿದರೆ ಇಲಾಹನು ಸ್ವರ್ಗ ಸೇರಿಸುವನು ಹುಜೂರರು ಹೇಳಿದುಂಟ್ಟು
ನಾನು ಇಲ್ಲವಾಗುವ ದಿನ ನನ್ನೊಂದಿಗಿರುವುದು ನೇರವಾದ ನುಡಿ – ನಡೆ ಹಂಚಿಕೊಂಡ ವಾತ್ಸಲ್ಯ ಹಂಚಿಂದ ಹೆಗಲೆಣೆ ನಾನು ಮಾಡಿದ ಸತ್ಕಾರ್ಯಗಳು ಮಾತ್ರ ಇನ್ನುಳಿದೆಲ್ಲವು ನಶ್ವರವೆಂದರಿತರೆ ನನ್ನ ನಿನ್ನ ಸ್ಮರಣಿ ಅಗಣಿತ
– ಆಮಿರ್ ಬನ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.