ಪರಂಗಿಪೇಟೆ(ವಿಶ್ವಕನ್ನಡಿಗ ನ್ಯೂಸ್): ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಅಮೆಮಾರ್ ಗೆ ಸಂಪರ್ಕ ಕಲಿಸುವ ಪುಂಚಮೆ ರಸ್ತೆ, ಕುಂಜತ್ಕಳ ರಸ್ತೆ, ರೈಲ್ವೇ ಸ್ಟೇಷನ್ ರಸ್ತೆ ಇಂದು ಸುರಿದ ದಾರಕಾರ ಮಳೆಗೆ ಜಾಲಾವ್ರತವಾಗಿ ದೈನಂದಿನ ಚಟುವಟಿಕೆಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ.
ಅಮೆಮಾರ್ ನಿಂದ ಫರಂಗಿಪೇಟೆಗೆ ಹೆಚ್ಚಿನ ಜನರು ಪುಂಚಮೆ ಮಾರ್ಗವಾಗಿ ನಡೆದುಕೊಂಡೇ ಅವಲಂಬಿತವಾದ ಈ ರಸ್ತೆ ವಾಸನೆಯಿಂದ ಕೂಡಿದ ನೀರು ತುಂಬಿ ಹರಿಯುತ್ತಿದ್ದು ಈ ನೀರಿನಲ್ಲಿಯೇ ಜನಸಾಮಾನ್ಯರು ನಡೆದಾಡಿ ದಿನನಿತ್ಯ ವಿವಿಧ ಚರ್ಮ ಸಂಭಂದಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಶನಿವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಪುಂಚಮೆ ಮತ್ತು ಕುಂಜತ್ಕಳ ರಸ್ತೆ ಜಾಲಾವ್ರತವಾಗಿ ಜನರು ವಿದ್ಯಾರ್ಥಿಗಳು, ಜನಸಾಮಾನ್ಯರು ನಡೆದಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಇಲ್ಲಿನ ನಾಗರಿಕರು ಸೇರಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಮತ್ತು ಅಮೆಮಾರ್ ವಾರ್ಡ್ ಸದಸ್ಯ ಅಬ್ದುಲ್ ರಝಾಕ್ ಸಮಸ್ಯೆಯನ್ನು ಪರಿಹಾರಗೆಯ್ಯುವ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಅದರಂತೆ ಇಲ್ಲಿನ ತೋಡಿನಲ್ಲಿ ಹರಿಯುವ ನೀರು ಕಸ ಇನ್ನಿತರ ತ್ಯಾಜ್ಯಗಳು ಶೇಖರಣೆಗೊಂಡು ಸರಾಗವಾಗಿ ನೀರು ಹರಿಯಲು ತೊಡಕಾಗಿದ್ದು ಇದರಿಂದ ನೀರು ಮಾರ್ಗ ಮದ್ಯೆ ಬರುತ್ತಿದೆ ಇದನ್ನರಿತ ಪುದು ಗ್ರಾಮ ಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಮತ್ತು ಅಮೆಮಾರ್ ವಾರ್ಡ್ ಸದಸ್ಯ ಅಬ್ದುಲ್ ರಝಾಕ್ ನಾಗರಿಕರ ಮನವಿಗೆ ಶೀಘ್ರ ಸ್ಪಂದಿಸಿದರು.
ಪ್ರಟಿಭಟನೆಯಲ್ಲಿ ಗ್ರಾಮ ಪಂ ಮಾಜಿ ಸದಸ್ಯರಾದ ಬಶೀರ್ ತಂಡೇಲ್ ಮತ್ತು ಸ್ಥಳೀಯರಾದ ಹೈದರ್ ಅಮೆಮಾರ್, ಇಮ್ರಾನ್ ಅರ್ಕುಳ, ಅಬ್ಬಾಸ್ ಎಫ್.ಎ, ಸಮೀರ್ ಸಿ. ಎಚ್, ಹಮೀದ್ ಬೀಡಿ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.