ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ಮನೆ ಸ್ವಚ್ಛಗೊಳಿಸುತ್ತಿದ್ದ ವೇಳೆ ಮನೆಯ ಟೆರಸಿನಿಂದ ಕಾಲುಜಾರಿ ಕೆಳಗೆ ಬಿದ್ದ ಯುವಕನನ್ನು ಅವನ ಸಹೋದರ ಅದ್ಭುತವಾಗಿ ರಕ್ಷಿಸಿದ್ದಾನೆ. ಮಲಪ್ಪುರಂ ಜಿಲ್ಲೆಯ ಚಂಗರಂಕುಲದಲ್ಲಿ ಈ ಘಟನೆ ನಡೆದಿದೆ. ಸಾದಿಕ್ ತನ್ನ ಸಹೋದರನಾದ ಶಫೀಕ್ ನನ್ನು ರಕ್ಷಿಸಿದ್ದಾರೆ.
ಶಫೀಕ್ ಮನೆ ಸ್ವಚ್ಛಗೊಳಿಸಲು ಟೆರಸಿಗೆ ಏರಿದ್ದ, ಸಾದಿಖ್ ಈ ಸಮಯದಲ್ಲಿ ಕೆಳಗಿನಿಂದ ನೀರು ಹೊಡೆದುಕೊಳ್ಳುತ್ತಿದ್ದ, ಈ ನಡುವೆ ಕಾಲುಜಾರಿ ಶಫೀಖ್ ಕೆಳಕ್ಕೆ ಬಿದ್ದ. ಇದುಕಂಡ ಸಾದಿಖ್ ಒಂದುನಿಮಿಷ ತಡಮಾಡದೆ ಸಹೋದರನನ್ನು ಕ್ಯಾಚ್ ಹಿಡಿದಿದ್ದಾರೆ. ಮನೆಯ ಸಿ ಸಿ ಟಿ ವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ದೃಶ್ಯಗಳು ವೈರಲ್ ಆಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.