(www.vknews.in) : ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಇತ್ತೀಚೆಗೆ ಕೋಮು ಮೈಘಮ್ಯದಿಂದಾಗಿ 3 ಮಂದಿ ಯುವಕರ ಸರಣಿ ಹತ್ಯಗಳಾಗಿದ್ದು ಜಿಲ್ಲೆಯಲ್ಲಿ ಭೀತಿಯ ವಾತಾವರಣ ನೆಲೆಸಿದೆ. ನಾಡಿನ ಶಾಂತಿಯನ್ನು ಕಾಪಾಡಿ ಸರ್ವ ಪ್ರಜೆಗಳಿಗೂ ರಕ್ಷಣೆ ನೀಡಬೇಕಾದ ಸಂವಿಧಾನ ಬದ್ಧ ಜವಾಬ್ದಾರಿಯು ರಾಜ್ಯ ಸರಕಾರದ್ದಾಗಿದೆ. ಆದರೆ ವಿಪರ್ಯಾಸವೆನ್ನಬೇಕಾಗಿದೆ ಶ್ರೀ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರಕಾರ ತಮ್ಮ ಜವಾಬ್ದಾರಿಯನ್ನು ಮರೆತು ರಾಜಕೀಯ ಲಾಭಕ್ಕಾಗಿ ಜನರಲ್ಲಿ ಬೇಧಬಾವವನ್ನು ತೋರಿಸಿ ಪ್ರಚೋಧಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂಪುಟದ ಸಚಿವರುಗಳು ಎನ್ಕೌಂಟರ್ ಮಾಡುವಂತೆ ಹೇಳಿಕೆಯನ್ನು ಕೊಡುತ್ತಿದ್ದಾರೆ. ಹತ್ಯೆಯಾದವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಕೂಡ ಪಕ್ಷ ಪಾತದ ಧೋರಣೆಯನ್ನು ಅನುಸರಿಸಿದ್ಧಾರೆ.
ರಾಜ್ಯ ಸರಕಾರದ ಈ ಎಲ್ಲ ನಡೆಯು ನಾಡಿನ ಪ್ರಜೆಗಳೆಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುವುದಾಗಿ ಮಾಡಿರುವ ಪ್ರತಿಜ್ಞೆಯ ಸ್ಪಸ್ಟೆ ಉಲ್ಲಂಘನೆಯಾಗಿರುತ್ತದೆ. ಆದುದರಿಂದ ತಾವು ಈ ಬಗ್ಗೆ ಪರಿಶೀಲಿಸಿ ಸಂವಿದಾನ ಬದ್ದವಾಗಿ ಮಾಡಿದ ಪ್ರತಿಜ್ಞೆಯನ್ನು ಉಲ್ಲಂಗಿಸಿರುವ *ರಾಜ್ಯ ಸರಕಾರವನ್ನು ತಕ್ಷಣ ವಜಾಗೊಳಿಸಲು ಗೌರವಾನ್ವಿತ ರಾಷ್ಟ್ರಪತಿಯವರಿಗೆ ಶಿಪಾರಸು ಮಾಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂಲೀಗ್ ವತಿಯಿಂದ ರಾಷ್ಟ್ರಪತಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಫಯಾಜ್, ಮಾಜಿ ಅಧ್ಯಕ್ಷ ಕರೀಂ ಕಡಬ, ಅಬ್ದುಲ್ ಖಾದರ್, ಜಿಲ್ಲಾ ಕಾರ್ಯದರ್ಶಿ ರಿಯಾಜ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.