ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮೋಟಿವೈಟಲ್ಜ್ ನ ವಿಶಿಷ್ಟ ಕೌಶಲ್ಯಾಭಿವೃದ್ಧಿ ಕೇಂದ್ರಗಳ ನೂತನ ಕಾರ್ಪೊರೇಟ್ ಕಛೇರಿಯು ಮಂಗಳೂರು ಗೇಟ್ ಕಂಕನಾಡಿಯಲ್ಲಿ ಆಗಸ್ಟ್ 1 ರಂದು ಕರ್ನಾಟಕ ವಿಧಾನ ಸಭೆಯ ವಿಪಕ್ಪ ನಾಯಕರಾದ ಶ್ರೀ ಯು.ಟಿ.ಖಾದರ್ ರವರು ಹಾಗೂ ಬದ್ರಿಯಾ ಜುಮಾ ಮಸೀದಿ ಕೃಷ್ಣಾಪುರದ ಖತೀಬರಾದ ಉಮರ್ ಫಾರೂಕ್ ಸಖಾಫಿ ರವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ನಂತರ ಓಶಿಯನ್ ಪರ್ಲ್ ಬ್ಯಾಂಕ್ವೆಟ್ ಹಾಲ್ನಲ್ಲಿ ಔಪಚಾರಿಕ ಕಾರ್ಯಕ್ರಮವು ಎಂ-ಲಾಂಚ್ ಆಚರಣೆಗಳಿಗೆ ಸಾಕ್ಷಿಯಾಯಿತು.
ಎಂ ಪವರ್ ಚಾರಿಟೇಬಲ್ ಟ್ರಸ್ಟ್ ಮತ್ತು ಮೋಟಿವೈಟಾಲ್ಜ್ ಕ್ಲಬ್ ಲೋಗೋಗಳನ್ನು ಮುಖ್ಯ ಅತಿಥಿಗಳಾದ ಶ್ರೀ ಮುಮ್ತಾಜ್ ಅಲಿ, ಚೇರ್ಮನ್ ಮಿಸ್ಬಾ ಕಾಲೇಜು ಕಾಟಿಪಳ್ಳ, ಶ್ರೀ ಹನೀಫ್ ಹಾಜಿ – ಮ್ಯಾನೇಜಿಂಗ್ ಟ್ರಸ್ಟಿ ಜೆಮ್ಸ್ ಪಬ್ಲಿಕ್ ಸ್ಕೂಲ್, ಶ್ರೀ ಮೂಸಬ್ಬ ಬ್ಯಾರಿ – ಅಧ್ಯಕ್ಷ MEIF , ಶ್ರೀ ಅಬಿದ್ ಅಸ್ಗರ್ – ಅಡ್ಮಿನ್ ಹಿದಾಯ ಅಕಾಡೆಮಿ, ಶ್ರೀ ನವೀದ್ ಮಾಗುಂಡಿ – ಸಿಇಒ ಇಗ್ನೈಟ್ಸ್ ದುಬೈ ಇವರು ಅನಾವರಣಗೊಳಿಸಿದರು.
Motivitalz ನಿಂದ ಶೈಕ್ಷಣಿಕ ಮತ್ತು ಆಡಳಿತ ನಿರ್ವಹಣೆಗಾಗಿ ಕುನಿಲ್ ಬಾಲಕಿಯರ ಪಿಯು ಕಾಲೇಜು ಮತ್ತು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಬಜಾಲ್ನೊಂದಿಗೆ ಎಂಒಯುಗೇ ಸಹಿ ಹಾಕಲಾಯಿತು. ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್, ಬ್ಯಾರೀಸ್ ಪಬ್ಲಿಕ್ ಸ್ಕೂಲ್, ಹೀರಾ ಸ್ಕೂಲ್ ಬಬ್ಬುಕಟ್ಟೆ ಇ ಸಂಸ್ಥೆಗಳೊಂದಿಗೆ ಎಂ ಕ್ಲಬ್ ಸಹಯೋಗಕ್ಕಾಗಿಕೂಡ ಎಂಓಯು ಸಹಿ ಮಾಡಲಾಯಿತು.
M-POWER CHARITABLE TRUST ನಿಂದ ವಿಸ್ತರಿಸಲಾದ AHMED BAVA COHORT DEVELOPMENT ಯೋಜನೇಯ ಅಡಿಯಲ್ಲಿ ಉಚಿತ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ಎರಡು ಶಾಲೆಗಳಾದ ಸಿರಾತೇ ಮುಸ್ತಕೀಮ್ ಸ್ಕೂಲ್ ಕಾಟಿಪಳ್ಳ ಹಾಗೂ ಅಲ್.ಖೈರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸುರಲ್ಪಾಡಿ ಇವುಗಳೊಂದಿಗೆ ಕೊಡ ಎಂಓಯು ಸಹಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಏಳು ವಿವಿಧ ಶಾಲೆಗಳ ಮಹಿಳಾ ಶಿಕ್ಷಕಿ ಯವರನ್ನು ಶಿಕ್ಷಣ ಕ್ಷೇತ್ರ ದಲ್ಲಿ ಅವರ ಅವಿರತ ಸೇವೆಗಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾದ ಶ್ರೀ ಯು.ಟಿ.ಖಾದರ್ ಅವರು Motivitalz ನ ವಿಶಿಷ್ಟ ಸೇವೆಗಳನ್ನು ಉಲ್ಲೇಖಿಸಿ,ಅಧ್ಯಕ್ಷರಾದ ಶ್ರೀ ಹಸನ್ ತೌಶೀದ್ ಬಾವಾ ಮತ್ತು ತಂಡವನ್ನು ಶ್ಲಾಘಿಸಿದರು. ಹಾಗೂ Motivitalz ಭಾರತ ಮತ್ತು ವಿಶ್ವಕ್ಕೆ ಗುಣಮಟ್ಟದ ನಾಗರಿಕರನ್ನು ಒದಗಿಸುವಲ್ಲಿ ದಾರಿ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
Motivitalz ನ ನಿರ್ದೇಶಕಿಯಾದ ಶ್ರೀಮತಿ ಮಮತಾ ಭಂಡಾರಿ ಅವರು ಸಭೆಯನ್ನು ಸ್ವಾಗತಿಸಿದರು ಮತ್ತು Motivitalz ಸೇವೆಗಳ ಬಗ್ಗೆ ತಿಳಿಸಿದರು.Motivitalz ನ ವ್ಯವಸ್ಥಾಪಕ ನಿರ್ದೇಶಕೀ ಯಾದ ಶ್ರೀಮತಿ ನಸ್ರೀನ್ ಬಿಂತ್ ಅಹ್ಮದ್ ಬಾವಾ ಅವರು ಮೋಟಿವಿಟಾಲ್ಜ್ನ ಯಶಸ್ಸಿನ ಪಯಣದ ವರದಿಯನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಅತ್ಯುತ್ತಮ ಉದ್ಯೋಗಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಅಬ್ದುಲ್ ರೆಹಮಾನ್ ಕರೆಸ್ಪೋಡೆಂಟ್ ಹೀರಾ ಸಂಸ್ಥೆ ಬಬ್ಬುಕಟ್ಟೆ, ಶ್ರೀ ಅಮೀನ್ ಹಸನ್ ಆಯ್ಷಾ ಶಾಲೆಯ ಅತ್ತೂರು, ಶ್ರೀ ಜಹೀರ್ ಕುನಿಲ್ ಜಿಪಿ ಟ್ರಸ್ಟ್ ಅಧ್ಯಕ್ಷ . ಶ್ರೀ ಸಂಶುದ್ದೀನ್ ಚೇರ್ಮನ್ ಕ್ರೆಸೆಂಟ್ ಸ್ಕೂಲ್ ಕಾಪು, ರಿಯಾಝ್ ಅಹ್ಮದ್ ಕಣ್ಣೂರ್ ಶಾಲೆ, ಶ್ರೀ ಮೊಹಮ್ಮದ್ ಅಲಿ ಕಮ್ಮರಾಡಿ, ಶ್ರೀ ನಿಸಾರ್, ಶ್ರೀ ಝಿಯಾ, ಶ್ರೀ ಮೊಹಮ್ಮದ್ ಬಿ.ಎ ಬಂಟ್ವಾಳ ಸೇರಿದಂತೆ ಹಲವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಾರಾ ನಿಮ್ರಾ ಮತ್ತು ಆಯಿಷಾ ಮೇಸೂನ್ ವ್ಯವಸ್ಥಾಪಕಿ ಮೋಟಿವೈಠಲಜ್ ಅವರ ಧನ್ಯವಾದಗಳು ಮತ್ತು ಹೈ-ಟೀ ಜೊತೆಗೆ ಮುಕ್ತಯಗೊಂಡಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.