(ವಿಶ್ವ ಕನ್ನಡಿಗ ನ್ಯೂಸ್) : ಸುನ್ನೀ ಸಮೂಹಕ್ಕೆ ಆತ್ಮೀಯ ನೇತೃತ್ವ ನೀಡುವ ಕರುನಾಡ ಪ್ರಖ್ಯಾತ ಪಂಡಿತ, ಸುನ್ನಿ ಆದರ್ಶ ವಿಚಾರದಲ್ಲಿ ಕೊಂಚ ಕೂಡಾ ಕಲುಷಿತ ಆಶಯದ ಮಿಶ್ರಣಕ್ಕೆ ತಲೆ ಭಾಗದ ಅಹ್ಲು ಸುನ್ನದ ISI ಮಾರ್ಕ್, ಸಮಾಜಕ್ಕಾಗಿ ಜ್ಙಾನಧಾರೆಯ ಪ್ರಕಾಶವನ್ನು ಪಸರಿಸಿದ ಮುಫ್ತಿ, ಹಲವಾರು ಪಂಡಿತರುಗಳ ಗುರು, ಸುನ್ನಿ ಮಕ್ಕಳ ಆದರ್ಶ ನಾಯಕ, ದೀನಿಗಾಗಿ ದಣಿವರಿಯದೆ ಸೇವೆ ಸಲ್ಲಿಸುತ್ತಿರುವ ಬಹುಮಾನ್ಯ ನೇತಾರರಿಗೆ ಅರ್ಹಿಸಿದ ಕೀರ್ತಿ ದೊರಕಿದೆ.
ಹೌದು ಸಮಸ್ತ ಕೇರಳ ಜಮೀಯತುಲ್ ಉಲಮಾದ ಆದರ್ಶ ಬದ್ದ ಸಂಘಟನೆ SKSSF ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮೆಲ್ಲರ ಹೆಮ್ಮೆಯ ನಾಯಕ ಮೌಲಾನಾ ಮುಫ್ತಿ ರಫೀಕ್ ಅಹ್ಮದ್ ಹುದವಿ ಕೋಲಾರೀ. 1986 ಮೇ 15 ರಂದು ಎ.ಎನ್. ಅಬ್ದುಲ್ ಖಾದರ್ ಹಾಗೂ ಆಮಿನ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಊರಾದ ಕೋಲಾರದಲ್ಲೇ ಕಲಿತು ವಿಶ್ವ ವಿಖ್ಯಾತ ಇಸ್ಲಾಮಿಕ್ ವಿಶ್ವ ವಿದ್ಯಾನಿಲಯ ದಾರುಲ್ ಹುದಾದಲ್ಲಿ ಶಿಕ್ಷಣವನ್ನು 2009ರಲ್ಲಿ ಹುದವಿ ಪದವಿಯೊಂದಿಗೆ ಕರಗತ ಮಾಡುವುದರೊಂದಿಗೆ,ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (B.A), 1999, ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಕಲಿತು,(M.A) ಉರ್ದು ಲೀಟರೇಚರ್ 2011 ಮೌಲಾನಾ ಆಜ಼ಾದ್ ನಾಶನಲ್ ಉರ್ದು ಊನಿವರ್ಸಿಟಿಯಲ್ಲಿ ಮುಗಿಸಿ, ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ (P.G.) 2011 ಜಾಮಿಯಾ ನಿಜಾಮಿಯಾ ಹೈಡ್ರಾಬಾದ್ನಲ್ಲಿ ಅಧ್ಯಾಯನ ಮುಗಿಸಿ, ಅರೇಬಿಕ್, ಇಂಗ್ಲಿಷ್ ,ಉರ್ದು ಮತ್ತು ಪಾರ್ಸಿ ಭಾಷೆಗಳಲ್ಲಿ ಅತ್ಯಂತ ಉತ್ತಮವಾದ ಬರಹ, ಲೇಖನ, ಪತ್ರಗಳಲ್ಲಿ ಸಂಪಾದಕೀಯಗಳಲ್ಲೂ ತನ್ನ ವೈಭವದ ಪ್ರಾವೀಣ್ಯತೆಯನ್ನು ತಿಳಿಸಿರುವ ಇವರು ಮಾಲಯಾಳಮ್ ಹಾಗೂ ಕನ್ನಡ ಭಾಷೆಯಲ್ಲೂ ಉತ್ತಮರು.
ಧಾರ್ಮಿಕ ವಿದ್ಯಾಭ್ಯಾಸ ಮುಗಿಸಿ ಪವಿತ್ರ ದೀನಿನ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಬೀಲುಲ್ ಹಿದಾಯ ಅರೇಬಿಕ್ ಕಾಲೇಜಿ ನಲ್ಲಿ ಮುದರ್ರಿಸಾಗಿ 2009 -2010 ಸೇವೆಗೈದು ನಂತರ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ ದಲ್ಲಿ ಮುದರ್ರಿಸರಾಗಿ 2010-2011 ಸೇವೆ ಸಲ್ಲಿಸಿ, ಪ್ರಸ್ತುತ ಪ್ರಖ್ಯಾತ ಕರುನಾಡ ಜಾಮಿಯ ಎಂದೇ ಪ್ರಸಿದ್ದಿ ಪಡೆದ ಶಂಸುಲ್ ಉಲಮಾ ಅರಬಿಕ್ ಕಾಲೇಜಿ ತೋಡಾರಿನ ಪ್ರಾಂಶುಪಾಲರಾಗಿ ಸೇವೆಯಲ್ಲಿ ನಿರತರಾಗಿದ್ದಾರೆ ಅದರೊಂದಿಗೆ ಹನಫಿ ಮಝ್ಹಬಿನ ಜಾಮಿಯ ನೂರಿಯಾದ ಪ್ರಥಮ ಸಹಸ್ಥಾಪನೆಗಳ ಅಂಗವಾಗಿರುವ ಮಕ್ದೂಮಿಯ್ಯ ಹನಫಿ ಕಾಲೇಜಿನ ಸ್ಥಾಪಕರೂ ನಿಯಂತ್ರಕರೂ ಹಾಗಿ ಕರುನಾಡ ಮಣ್ಣಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೇರಳದ ಹಲವು ವಿದ್ಯಾಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕರೆ ಬಂದರೂ ಮರ್ಹುಂ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ (ನ.ಮ) ರವರ ನಿರ್ದೇಶನೆಯ ಕಾರಣದಿಂದಾಗಿ ಕರುನಾಡಿನಲ್ಲೇ ಸೇವೆಯಲ್ಲಿ ತೊಡಗಿದ್ದಾರೆ. ಹುದವಿ, ಅರ್ಷದಿ, ನಿಜಾಮಿ ಬಿರುದುಗಳನ್ನು ಪಡೆದ ಇವರು ಕಲಿಕೆಯನ್ನು ಮುಗಿಸದೆ ಪವಿತ್ರ ಹದೀಸಿನ ನಿರ್ವಾಕರಾಗಿ ರಿಸರ್ಚ್ ಮಾಡುತಿದ್ದಾರೆ. ಸುನ್ನಿ ಆದರ್ಶ ರಂಗದಲ್ಲಿ ಹಲವಾರು ಸೇವೆಯನ್ನುಗೈದ ಇವರು ಇಬಾದಿನ ಚೈರ್ಮಾನಾಗಿ, ಜಮೀಯತುಲ್ ಮುದರ್ರಿಸೀನಿನ ಎಕ್ಸಿಕ್ಯೂಟಿವ್ ಮೆಂಬರಾಗಿ, ಸೌತ್ ಇಂಡಿಯನ್ ಅರೇಬಿಕ್ ಕೌನ್ಸಿಲ್ನ ಖಜಾಂಜಿಯಾಗಿ, ದಾರುಲ್ ಹುದಾ ಇಸ್ಲಾಮಿಕ್ ಊನಿವರ್ಸಿಟಿಯ ಸನೆಟ್ ಮೆಂಬರಾಗಿ, ಹನಫಿ ವಿಭಾಗದ ಮುಫ್ತಿಯಾಗಿ, ಕರ್ನಾಟಕದಲ್ಲಿ ಕಾರ್ಯ ಚರಿಸುತ್ತಿರುವ ನಾಷನಲ್ ಮಿಷನ್ ಎಂಬ ಪುಣ್ಯ ಸಮಸ್ತದ ಪ್ರಧಾನ ಅಂಗವಾಗಿ ಸೇವಸೆಲ್ಲಿಸುತ್ತಿದ್ದಾರೆ.
ಇದೀಗ ಅವರ ಸಂಘಟನಾ ಕಾರ್ಯವನ್ನು ತಿಳಿದು ಪುಣ್ಯ ಸಮಸ್ತದ ನಾಯಕರುಗಳು ಅವರ ಅರ್ಹತೆಗೆ ಅತ್ಯಂತ ಅತ್ಯುನ್ನತ ಸೇವಾ ಮಾರ್ಗವಾದ SKSSFನ ಅಧ್ಯಕ್ಷ ಪದವಿಗೆ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲಾಹನು ಬಹುಮಾನ್ಯರಾದ ಉಸ್ತಾದರಿಗೆ ಇನ್ನೂ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ, ಸುನ್ನಿ ಮಕ್ಕಳ ಉನ್ನತಿಗಾಗಿ, ಸಮುದಾಯದ ಒಳಿತಿಗಾಗಿ ಸೇವೆ ಸಲ್ಲಿಸಲು ತೌಫೀಕ್ ನೀಡಲಿ ಎಂದು ಅಲ್ಲಾಹನಲ್ಲಿ ಪ್ರಾಥಿಸುತ್ತಿದ್ದೇವೆ.
✍🏻 ಯಾಸರ್ ಉಮರ್ ಮಾದಾಪುರ ( ಟ್ರಶರರ್ ತ್ವಲಬಾ ವಿಂಗ್ ಕೊಡಗು ಜಿಲ್ಲಾ ಸಮಿತಿ )
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.