ಮಂಗಳೂರು (www.vknews.in) : ಬಂದರ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಅಸ್ಸಯ್ಯಿದ್ ಮೌಲಾ ಜಲಾಲ್ ಮಸ್ತಾನ್ ದರ್ಗಾಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ರಾದ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯಿಂದ ಸನ್ಮಾನ ಮಾಡಲಾಯಿತು.
ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಆಡಳಿತ ಸಮಿತಿ ನೇತರರಾದ ಎಸ್ ಎಮ್ ರಷೀದ್ ಹಾಜಿ, ಉಪಾಧ್ಯಕ್ಷ ರಾದ ಮಾಜಿ ಮೇಯರ್ ಕೆ ಅಶ್ರಫ್, ಹನೀಫ್ ಹಾಜಿ, ಅದ್ದು ಹಾಜಿ, ಸಮದ್ ಹಾಜಿ, ಮೊಹ್ದಿನಬ್ಬ ಹಾಜಿಯವರ ಸಮ್ಮುಖದಲ್ಲಿ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ರಾದ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಜನಾಬ್ ಜಮಾಲ್, ಜನಾಬ್ ಪಕೀರಬ್ಬ ಮಾಸ್ಟರ್, ಅಶ್ರಫ್ ಕಿನಾರ ಮಂಗಳೂರು, ಸೈದುದ್ದೀನ್, ಸಿರಾಜ್ ರವರನ್ನು ಗೌರವಿಸಲಾಯಿತು. ಅದ್ದು ಹಾಜಿ ಪ್ರಿಂಟಕ್, ಮಸೀದಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.