(ವಿಶ್ವ ಕನ್ನಡಿಗ ನ್ಯೂಸ್) : ದೇಶವು 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇದ್ದು,ಪ್ರತಿ ವರ್ಷದಂತೆ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ದೇಶದ ಮುಸ್ಲಿಮರು ಮಹತ್ವದ ಪಾತ್ರ ವಹಿಸಿದ್ದಾರೆ. ಘಟಾನುಘಟಿ ಮುಸ್ಲಿಮರು ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಈ ದೇಶದ ಸರ್ವ ಧರ್ಮದವರ ಸಾನಿಧ್ಯದಲ್ಲಿ ಅಂದು ಹೋರಾಟ ನಡೆದು, ತಮ್ಮ ದೇಶ ಪ್ರೇಮವನ್ನು ಮೆರೆದಿದ್ದಾರೆ.
ಈ ದೇಶದ ತ್ರಿವರ್ಣ ದ್ವಜವನ್ನು ವಿನ್ಯಾಸ ಗೊಳಿಸಿದ ಕೀರ್ತಿ ಸುರಯ್ಯ ತ್ಯಾಬ್ಜಿ ಎಂಬ ಮುಸ್ಲಿಮ್ ಮಹಿಳೆಗೆ ಸಲ್ಲಬೇಕು. ಈ ದೇಶದ ದ್ವಜ ಲಾಂಛನಕ್ಕಾಗಿ ಸುರಯ್ಯಾ ತ್ಯಾಬ್ಜಿ ಅವರು ಅಶೋಕ ಚಕ್ರವನ್ನು ಆಯ್ಕೆ ಮಾಡಿದರು.ಇದು ಅವರ ಮತೇತರ ಚಿಂತನೆಯನ್ನು ಪ್ರತಿಪಾದಿಸುತ್ತದೆ. ಈ ದೇಶದ ಮುಸ್ಲಿಮ್ ಸಾಮಾನ್ಯ ಜನತೆ,ಪ್ರತಿನಿಧಿಗಳು, ಸಂಸ್ಥೆಗಳು,ಸಂಘಟನೆಗಳು ಅಂದು ಪಡೆದ ಸ್ವಾತಂತ್ರ್ಯದ ಮಹತ್ವನ್ನು ಅರಿತು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾ ಬಂದಿರುತ್ತಾರೆ.
ಈ ದೇಶದ ಮುಸ್ಲಿಮರ ದೇಶಪ್ರೇಮವನ್ನು ಬಹುಷ್ಯ ಹತ್ತಿರದಿಂದ ಬಲ್ಲವರಾಗಿದ್ದಾರೆ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು.ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ಮೆ ತಿರಂಗಾ ಅಭಿಯಾನ ಘೋಷಿಸಿದ್ದು , ಈ ದೇಶದ ಮೇಲಿನ ಮುಸ್ಲಿಮರ ದೇಶ ಪ್ರೇಮವನ್ನು,ಸ್ವಾತಂತ್ರ್ಯ ದಿನಾಚರಣೆಯ ಮಾನದಂಡದ ಮೂಲಕ ಅಳೆಯಲು ಅಲ್ಲ , ಬದಲಾಗಿ ಈ ದೇಶದಲ್ಲಿ ತಿರಂಗಾ ಹೊರತಾದ ಇತರ ದ್ವಜಗಳಲ್ಲಿ ಎಷ್ಟು ಜನರಿಗೆ ಆಸಕ್ತಿ ಇದೆ ಎಂಬ ವೀಕ್ಷಣೆಗಾಗಿ ಎಂದು ಆಲೋಚಿಸ ಬೇಕಿದೆ. ಹಾಗೆನಿದ್ದರೂ,ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಯಶಸ್ವಿ ಯಾಗಲಿ.
ಕೆ.ಅಶ್ರಫ್. ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.