ಅಹಮದಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಜೀವಂತ ಸಮಾಧಿಯಾಗಿದ್ದ ಅಂಬೆಗಾಲಿಡುವ ಮಗುವನ್ನು ರೈತರೊಬ್ಬರು ರಕ್ಷಿಸಿದ ಘಟನೆ ಗುಜರಾತ್ನ ಸಬರ್ಕಾಂತದಲ್ಲಿ ನಡೆದಿದೆ. ಜಮೀನಿನಿಂದ ಮಗು ಅಳುವುದು ಕೇಳಿ ಬಂದ ನಂತರ ಮಗು ಪತ್ತೆಯಾಗಿದೆ. ಸಬರ್ ಕಾಂತಾದ ಗಂಭೋಯ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಗುವಿನ ತೋಳು ಹಳ್ಳದಿಂದ ಹೊರಬಿದ್ದಿತ್ತು. ಮಣ್ಣನ್ನು ಸರಿಸಿ ಮಗುವನ್ನು ಹೊರತೆಗೆದ ಬಳಿಕ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ಐಸಿಯುಗೆ ಸ್ಥಳಾಂತರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಗುವಿನ ಪೋಷಕರಿಗಾಗಿ ಹುಡುಕಾಟ ಆರಂಭಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.