ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ):ಶ್ರೀನಿವಾಸಪುರ ಠಾಣಾ ವ್ಯಾಪ್ತಿಯ ವಳಗೆರನಹಳ್ಳಿಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಖಚಿತ ಮಾಹಿತಯ ಮೇರಗೆ ಅಕ್ರಮವಾಗಿ ಗಾಂಜವನ್ನು ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಕೋಲಾರ ನಗರದ ಟವರ್ ವಾಸಿಯಾದ ನೂರ್ಪಾಷ ಬಿನ್ ಲೇಟ್ ಅಮೀರ್ ಖಾನ್ ( ೫೦ ವರ್ಷ ) ಬಂದಿಸಿ ೨೧ ಕೆಜಿ ತೂಕದ ಸುಮಾರು ೧೦ ಲಕ್ಷ ೫೦ ಸಾವಿರರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡು , ಆರೋಪಿ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಶ್ರೀನಿವಾಸಪರ ಠಾಣೆಯಲ್ಲಿ ಎನ್ಪಿಎಸ್ ಕಾಯ್ದೆ ಅಡಿಯಲ್ಲಿ ಪೊಲೀಸ್ ನಿರೀಕ್ಷಕ ಜಿ.ಸಿ.ನಾರಾಯಣಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ .
ಈ ದಾಳಿಯನ್ನು ಜಿಲ್ಲಾ ರಕ್ಷಾಣಧಿಕಾರಿಗಳ ಡಿ.ದೇವರಾಜ್ , ಪೊಲೀಸ್ ಅಧೀಕ್ಷಕ ಸಚಿನ್ ಪಿ . ಘೋರ್ಪಡೆ ಮಾರ್ಗದರ್ಶನದಲ್ಲಿ ಡಿಎಸ್ಪಿ ಪಿ.ಮುರಳಿಧರ್ ಮುಂದಾಳತ್ವದಲ್ಲಿ ಅಪರಾದ ವಿಭಾಗದ ಎಎಸ್ಐ ಅಮೀದ್ಖಾನ್ ಹಾಗೂ ಸಿಬ್ಬಂದಿಗಳಾದ ರಾಮಚಂದ್ರ , ಮಂಜುನಾಥ್ , ಸುರೇಶ್ , ವೆಂಕಟಾಚಲಪತಿ , ಷಫೀವುಲ್ಲಾ , ಸಂದೀಪ್ , ರಿಜ್ವಾನ್ , ಸುಬಾನ್ ಆರೋಪಿಯನ್ನು ಬಂದಿಸುವ ಕಾರ್ಯದಲ್ಲಿ ಪಾಲ್ಗುಂಡಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.