ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ಪಾಣಕ್ಕಾಡ್ ಸಯ್ಯದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಅನುಸ್ಮರಣೆ ಹಾಗೂ ನ್ಯಾಷನಲ್ ಮಿಷನ್ ಕರ್ನಾಟಕ ಇದರ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭವು ಆಗಸ್ಟ್ ೦೧ ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಧಾರವಾಡ ಜಿಲ್ಲೆಯ ಕುಂದಗೋಳ ನಗರದಲ್ಲಿ ನಡೆಯಿತು.
ಮಖಾಂ ಝಿಯಾರತ್, ಮೊಅಲ್ಲ ಸಂದರ್ಶನ ,ಮದರಸ ಮಕ್ಕಳಿಗೆ ಸಿಹಿ ವಿತರಣೆ,ರೇಂಜ್ ಮುಅಲ್ಲಿಂ ಸಭೆ, ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮದೊಂದಿಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಕ್ಯಾಂಪೈನ್ ಡೈರಕ್ಟರಾದ ಮುಫ್ತಿ ರಫೀಕ್ ಅಹ್ಮದ್ ಹುದವಿ ನಿಝಾಮಿ ಅಲ್ ಖಾದಿರಿ ಕೋಲಾರಿ ಅವರ ದುಆದೊಂದಿಗೆ ಧ್ವಜಾರೋಹಣ ಮಾಡಲಾಯಿತು.
ಮೌಲಾನಾ ಕುತುಬುದ್ದೀನ್ ಅಶ್ರಫಿ, ಮೌಲಾನಾ ಆರಿಫ್ ಅಮ್ಜದಿ, ಮೌಲಾನಾ ಕಲೀಂ ಅಮ್ಜದಿ, ಮೌಲಾನ ಇಮ್ರಾನ್ ಅಶ್ರಫಿ, ಮೌಲಾನಾ ಶುಹೈಬ್ ಅಶ್ರಫಿ ನ್ಯಾಷನಲ್ ಮಿಷನ್ ಕರ್ನಾಟಕ ನಾಯಕರಾದ ಜನಾಬ್ ಶರೀಫ್ ಮೂಸ ಕುದ್ದುಪದವು ಜನಾಬ್ ರಷೀದ್ ಹಾಜಿ ಪರ್ಲಡ್ಕ ಸಮಸ್ತ ಗಲ್ಫ್ ನೇತಾರರಾದ ಬಹು ಸುಲೈಮಾನ್ ಮೌಲವಿ ಕಲ್ಲೇಗ ದುಬೈ ಬಹು ನೂರ್ ಮುಹಮ್ಮದ್ ನೀರ್ಕಜೆ ದುಬೈ ಉಸ್ತಾದ್ ರಝ್ಝಾಕ್ ಫೈಝಿ ಬಾಂಬಿಲ ಸೌದಿ ಅರೇಬಿಯಾ ಬಹು ಬಷೀರ್ ಅರಂಬೂರು ರಿಯಾದ್ ಸೌದಿ ಅರೇಬಿಯಾ ಭಾಗವಹಿಸಿ ಆಶೀರ್ವದಿಸಿದರು.
ಹಾದಿಯ ನ್ಯಾಷನಲ್ ಟ್ರೈನರ್ ಉಸ್ತಾದ್ ಹಕೀಂ ಹುದವಿ ಉಸ್ತಾದ್ ಶಂಸುದ್ದೀನ್ ಹನೀಫಿ ಉಸ್ತಾದ್ ಇರ್ಷಾದ್ ದಾರಿಮಿ ಬಾಂಬಿಲ ಉತ್ತರ ಕರ್ನಾಟಕದ ಸಮಸ್ತ ದಾಯಿಗಳಾದ ಉಸ್ತಾದ್ ಆಮೀನ್ ಫೈಝಿ ಅಲ್ ಮಅಬರಿ ಉಸ್ತಾದ್ ನೌಷೀನ್ ಫೈಝಿ ಅಲ್ ಮಅಬರಿ ಉಸ್ತಾದ್ ಇಬ್ರಾಹಿಂ ಬಾತಿಷ ಶಂಸಿ ಕಾರ್ಯಕ್ರಮದ ವಿವಿದ ಸೆಷನುಗಳಿಗೆ ನಾಯಕತ್ವ ವಹಿಸಿದರು. ಸಭೆಯಲ್ಲಿ ಕುಂದುಗೋಳ ರೇಂಜಿನ ಎಲ್ಲಾ ಉಲಮಾಗಳು,ಕುಂದುಗೋಳ ನಗರದ ನೂರಾರು ಹಿರಿಯರು,ಯುವಕರು ಮಕ್ಕಳು ಭಾಗವಹಿಸಿದ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ಯಶಸ್ವಿ ಯಾಗಿ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ನೂತನವಾಗಿ SKSSF ರಾಜ್ಯ ಸಮಿತಿಗೆ ಆಯ್ಕೆ ಯಾದ ನೂತನ ಫದಾಧಿಕಾರಿಗೆ ಅಭಿನಂದನೆಗಳು ಸಲ್ಲಿಸುತ್ತಾ ಸಮಸ್ತದ ದ್ವಜವನ್ನು ಬಾನೆತ್ತರಕ್ಕೆ ಹಾರಿಸಿ ಉತ್ತರ ಕರ್ನಾಟಕದ ಶೈಕ್ಷಣಿಕ ಕಡೆಗೆ ರಾಜ್ಯ ನಾಯಕರ ಗಮನವನ್ನು ಹರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.