ಮೊಟ್ಟಮೊದಲಿಗೆ ಪಾವೂರುಗ್ರಾಮ ಪಂಚಾಯತ್ ಆಡಳಿತಕ್ಕೂ, ಅಧಿಕಾರಿ ವರ್ಗಕ್ಕೂ ನಾನು ಧನ್ಯವಾದ ಸಮರ್ಪಿಸುತ್ತಿದ್ದೇನೆ..
(www.vknews.in) : ರಾಜಕೀಯ ಅಧಿಕಾರ ಸ್ಥಾನಮಾನ ಶಾಸ್ವತವಲ್ಲ, ಇದೆಲ್ಲವೂ ನಮ್ಮಬಳಿ ಇರುವಾಗ ಮಾಡುವ ಸೇವೆಗಳಾಗಿದೆ ಶಾಸ್ವತ. 2022 ರ ಮಳೆಗಾಲದ ಆಗಮನ ಭಾರೀ ಅನಾಹುತಗಳನ್ನೇ ಸ್ರಷ್ಟಿಸಿತ್ತು. ಅದರಲ್ಲೂ ನಮ್ಮ ಪಾವೂರುಗ್ರಾಮದಲ್ಲಂತೂ, ಮಳೆರಾಯನ ಆರ್ಭಟಕ್ಕೆ, ಮರಗಳು ಉರುಳಿದ್ದವು, ಮನೆಗಳ ಮೇಲೆ ಗುಡ್ಡ ಕುಸಿದು ಬ್ರಹತಾಕಾರದ ಕಲ್ಲುಗಳು ಬಿದ್ದು ಅಪಾರ ಹಾನಿಯಾಗಿದ್ದವು. ಇದರಿಂದ ಮನೆಮಂದಿಗೂ ತಲೆಕೈಕಾಲುಗಳಿಗೆ ಗಾಯವಾಗಿದ್ದವು. ಆ ಮಟ್ಟಿಗೆ ಗ್ರಾಮದಲ್ಲಿ ಪ್ರಕ್ರತಿ ವಿಕೋಪಗೊಂಡಿದ್ದವು. ಮಳೆಯ ಆರ್ಭಟಕ್ಕೆ ಎರಡೆರಡು ಭಾರೀ ಗುಡ್ಡ ಕುಸಿದು ಆಘಾತಕ್ಕೀಡಾದ ಕುಟುಂಬವು ಬಾಡಿಗೆ ಮನೆಗೆ ಹೋಗುವ ಪರಿಸ್ಥಿತಿಯು ಬಂದಿತ್ತು.
ಈ ಎಲ್ಲಾ ಸಮಯದಲ್ಲಿ SDPI ಕಾರ್ಯಕರ್ತರು ನೊಂದ ಕುಟುಂಬಗಳ ಜೊತೆ ನಿಂತು ಅವರಿಗೆ ನೆರವಾಗುವ ಮೂಲಕ ಮಾನವೀಯತೆಯ ಕೆಲಸಗಳನ್ನು ಮಾಡಿದ್ದರು. ಈ ಎಲ್ಲಾ ಸಂಧರ್ಭದಲ್ಲಿ ಚುರುಚುರುಕಿನ ಕಾರ್ಯಪ್ರವ್ರತ್ತಿಯೊಂದಿಗೆ ಪಾವೂರುಗ್ರಾಮ ಪಂಚಾಯತ್ ಅಧ್ಯಕ್ಷೆ ಕಮರುನ್ನಿಸಾ ನೌಫಲ್, ಉಪಾಧ್ಯಕ್ಷರಾದ ಅನ್ಸಾರ್ ಇನೋಳಿಯವರು ಹೆಚ್ಚಿನ ಮುತುವರ್ಜಿ ವಹಿಸಿ ಪಂಚಾಯತ್ ಸದಸ್ಯರ ಮುಂದಾಳತ್ವದಲ್ಲಿ, ಜನರೊಂದಿಗೆ ಅವರ ಸಂಕಷ್ಟದೊಂದಿಗೆ ನಿಂತು ನಿರಂತರ ಜೆಸಿಬಿಯ ಮೂಲಕ ತುರ್ತು ಸೇವೆಯನ್ನು ಮಾಡಿಕೊಟ್ಟಿದ್ದು ಜನಮನಸ್ಸುಗಳಲ್ಲಿ ಅಭಿನಂದನೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು.ಪ್ರಕ್ರತಿ ವಿಕೋಪಕ್ಕೀಡಾದವರಿಗೆ ಸರಕಾರದ ಪ್ರಕ್ರತಿ ವಿಕೋಪದಡಿಯಲ್ಲಿ ಪರಿಹಾರ ಪಡೆದುಕೊಳ್ಳಲು ಪಂಚಾಯತ್ ಆಡಳಿತ ಹಾಗೂ ಅಧಿಕಾರಿ ವರ್ಗವೂ ನೊಂದ ಕುಟುಂಬಗಳ ಸಂಕ್ಷಿಪ್ತ ಮಾಹಿತಿಗಳನ್ನು ಪಡೆದು ದಾಖಲೆಗಳನ್ನು ಸಂಗ್ರಹಿಸಿ ಪರಿಹಾರದ ಕೆಲಸಕಾರ್ಯಕ್ಕೆ ಸ್ಪಂದಿಸಿದ್ದವು.
ಈ ಸಂಧರ್ಭದಲ್ಲಿ ನನ್ನೊಂದಿಗೆ ನನ್ನ ಪಕ್ಷದ ಕಾರ್ಯಕರ್ತ ಬಳಗವೂ ನೊಂದ ಕುಟುಂಬಗಳಿಗೆ ಈ ಬಗ್ಗೆ ಮಾಹಿತಿ ನೀಡಿ, ದಾಖಲೆಗಳನ್ನು ಸಂಗ್ರಹಿಸಲು ಅದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡಿದ್ದೆವು. ಅಲ್ ಹಂದುಲಿಲ್ಲಾಹ್ ಇಂದು ಪ್ರಕ್ರತಿ ವಿಕೋಪದಡಿಯಲ್ಲಿ ಪರಿಹಾರ ನೊಂದ ಕುಟುಂಬಗಳು ಪಡೆದುಕೊಳ್ಳುತ್ತಿವೆ. ಪಾವೂರುಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ವರ್ಗದ ಸ್ಪಂದಣೆಗೆ ಒಂದೇ ತಿಂಗಳಿನಲ್ಲಿ ಸರಕಾರದ ಪರಿಹಾರ ಸಿಗಲು ಕಾರಣವಾಗಿದೆ. ಕರೆಮಾಡಿ ತಿಳಿಸಿ ಧನ್ಯವಾದ ತಿಳಿಸಿದರು. ಆ ಸಂಧರ್ಭದಲ್ಲಿ ನಾನು ನನ್ನ ಪಕ್ಷದ ಕಾರ್ಯಕರ್ತ ಬಳಗ ಮಾಡಿದ ಸೇವೆಯನ್ನು ಗಮನದಲ್ಲಿಟ್ಟು ಹಾಗೂ ಇಂದು ಪ್ರಕ್ರಿತಿ ವಿಕೋಪದಡಿ ಪರಿಹಾರ ಪಡೆದುಕೊಂಡ ಕುಟುಂಬದ ಸದಸ್ಯರೊಬ್ಬರೂ ನಮಗೆ ಕರೆ ಮಾಡಿ ಧನ್ಯವಾದ ತಿಳಿಸಿದರು.
ಆ ಸಮಯದಲ್ಲಿ ನನಗೆ ಅಪಾರ ಖುಷಿಯಾಯಿತು. ಕಳೆದ ವರ್ಷವೂ ನಾವು ಹಲವಾರ ಮನೆಗಳಿಗೆ ಪ್ರಕ್ರತಿವಿಕೋಪದಡಿಯಲ್ಲಿ ಪರಿಹಾರ ಸಿಗುವ ಕಾರ್ಯದಲ್ಲಿ ಅವರ ಜೊತೆ ನಿಂತಿದ್ದೆವು. ಕೊನೆಯದಾಗಿ ರಾಜಕೀಯ ಸ್ಥಾನಮಾನ ಅಧಿಕಾರ ಎಲ್ಲವೂ ಜನರ ಸಂಕಷ್ಟದ ಸಮಯದಲ್ಲಿ ಉಪಕಾರಿಯಾಗಬೇಕು. ಅದರಲ್ಲಾಗುವ ತ್ರಪ್ತಿಯು ಮನಸ್ಸಿಗೆ ಖುಷಿ ತಂದುಕೊಡುತ್ತೆ.
✍️ ಶಮೀರ್ ಟಿಪ್ಪುನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.