(ವಿಶ್ವ ಕನ್ನಡಿಗ ನ್ಯೂಸ್) : ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ”ಎ.ಕೆ.ಅಶ್ವತ್ಥಡಿ” ಎಂಬ ಯುವಕ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತ್ರ ಈ ಕೆಳಗಿನಂತೆ ಇದೆ.
ನನ್ನ ಪ್ರೀತಿಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ನಮಸ್ಕಾರಗಳು. ನಾನೊಬ್ಬ ಪುತ್ತೂರು ತಾಲ್ಲೂಕು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕಾಂಗ್ರೆಸ್ ಪಕ್ಷದ ಕೆಳಮಟ್ಟದ ಸಾಮಾನ್ಯ ಕಾರ್ಯಕರ್ತ ಮತ್ತು ಹಲವಾರು ವರ್ಷದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಮಾತ್ರ ನಿಷ್ಠೆಯಿಂದ, ಶ್ರದ್ದೆಯಿಂದ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಹೊರತು ವ್ಯಕ್ತಿ ಪೂಜೆ ಮಾಡಿದವನಲ್ಲ, ಸ್ಪಷ್ಟವಾಗಿ ಹೇಳಬೇಕು ಎಂದರೆ ಒಬ್ಬ ಕಾಂಗ್ರೆಸ್ ನಾಯಕ/ ನಾಯಕಿಯ ಹಿಂದೆ ಹೋಗಿ ಅವರ ಸ್ವಾರ್ಥಕ್ಕಾಗಿ ಸೇಡಿನ ರಾಜಕೀಯ ಅಥವಾ ಬಣ ರಾಜಕೀಯ ಮಾಡಲು ಹೋದವನಲ್ಲ.
ಇದು ಇಲ್ಲಿ ಹೇಳಲು ಕಾರಣ ಏನೆಂದರೆ, ನಮ್ಮ ಪುತ್ತೂರು ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಪತನದ ಕಡೆ ಮುಖ ಮಾಡಿದೆ, ಇದಕ್ಕೆ ಕಾರಣಕರ್ತರು ನಾವೇ ಆಗಿರುತ್ತೇವೆ. ನಾವು ಪಕ್ಷ ನಿಷ್ಠೆ ಬಿಟ್ಟು ವ್ಯಕ್ತಿ ನಿಷ್ಠೆ ಮಾಡಿದ ಕಾರಣ ನಮ್ಮ ಕಾಂಗ್ರೆಸ್ ಪಕ್ಷ ಹಲವಾರು ವರುಷಗಳಿಂದ ಆಡಳಿತ ನಡೆಸಿದ ಪ್ರಬಲ ಪಾಳಯ ಆಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಆಡಳಿತ ಕಳೆದು ಕೊಂಡಿರುದು ಮಾತ್ರವಲ್ಲದೆ ಹಲವಾರು ನಿಷ್ಠಾವಂತ ನಾಯಕರು ಹಾಗೂ ಕಾರ್ಯಕರ್ತರನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಅವನತಿಯ ಹಾದಿ ಹಿಡಿದಿದೆ, ಇದಕ್ಕೆಲ್ಲಾ ಕಾರಣವಾದ ಪುತ್ತೂರಿನ ಬಣ ರಾಜಕೀಯ ಕೊನೆಗೊಳ್ಳಬೇಕು.
ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸ್ವಲ್ಪ ಮಟ್ಟಿಗೆ ಗಮನಿಸಿಕೊಂಡು ಬಂದಂತಹ ಹಲವಾರು ಘಟನೆಗಳು ಇವೆ. ಅವುಗಳಲ್ಲಿ ಕೆಲವನ್ನು ಕೆಳಗೆ ತಿಳಿಸುತ್ತೇನೆ
ಕಾಂಗ್ರೆಸ್ ಪಕ್ಷ ಕೊಟ್ಟ ಹೆಸರು, ಪದವಿ ಇಟ್ಟುಕೊಂಡು ಕೆಲವು ನಾಯಕರುಗಳ ಚಟುವಟಿಕೆ ಮತ್ತು ಮಾತುಗಳನ್ನು ಕೇಳಿದ್ದೇನೆ, ಅದೇ ಪಕ್ಷದ ಇನ್ನೊಬ ನಾಯಕ ಪಕ್ಷದ ಕಾರ್ಯಕ್ರಮ ಹಮ್ಮಿಕೊಂಡಾಗ ಅವನು ಮಾಡುವ ಕಾರ್ಯಕ್ರಮ ಅದನ್ನು ನಾವು ಬಹಿಷ್ಕರಿಸ್ಬೇಕು, ಅದೇ ರೀತಿ ಇನ್ನೊಬ್ಬ ನಾಯಕ ಬಿಜೆಪಿ ಅಧಿಕಾರಕ್ಕೆ ಬಂದರೂ ಆಗಬಹುದು ಅವಳಿಗೆ ವೋಟ್ ಹಾಕಬಾರದು ಎಂದು ತನ್ನ ತನ್ನ ಸ್ವಾರ್ಥ ಅಥವಾ ಸೇಡಿನ ರಾಜಕೀಯಕ್ಕೋಸ್ಕರ ಕೆಳಮಟ್ಟದ ಕಾರ್ಯಕರ್ತರ ತಲೆಯಲ್ಲೂ ದ್ವೇಷ ತುಂಬಿ 2-3 ಬಣ ಮಾಡಿ ಕಾಂಗ್ರೆಸ್ ಪಕ್ಷವನ್ನು ಇಬ್ಬಾಗ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಇಂತಹ ಹಲವಾರು ಘಟನೆಗಳು ಈಗಲೂ ನಡೆಯುತ್ತಾ ಇದೆ, ಇದು ಒಂದು ಸಣ್ಣ ಉದಾಹರಣೆ ಅಷ್ಟೇ.
ನನ್ನ ಪ್ರೀತಿಯ ನಾಯಕರಲ್ಲಿ ನಾನು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ವಿನಂತಿ ಮಾಡುತ್ತೇನೆ, ನಮ್ಮ ಸೇಡಿನ ಅಥವಾ ಬಣ ರಾಜಕೀಯದಲ್ಲಿ ಲಾಭ ಪಡೆದು ಉಳಿದ ಪಕ್ಷದವರು ಹಾಯಾಗಿ ಆಡಳಿತ ನಡಿಸುತ್ತಿದ್ದಾರೆ, ಇನ್ನಾದರೂ ನಾಯಕರು ಹಾಗೂ ಕಾರ್ಯಕರ್ತರು ಒಂದಾಗಿ ಸೇಡು, ವೈಮನಸ್ಸು ಹಾಗೂ ಅಧಿಕಾರ ದಾಹ ಎಲ್ಲವನ್ನೂ ಬಿಟ್ಟು ಇಂದಿನಿಂದಲೇ ಶ್ರಮ ಪಟ್ಟು ಪಕ್ಷವನ್ನು ಕೆಳಮಟ್ಟದಿಂದ ಪುನಃ ಬಲಶಾಲಿಯಾಗಿ ಕಟ್ಟಿ ಮುಂದಿನ ವರ್ಷ ಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಬೇಕು.
ಮುಂದಿನ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ, ಆದ ಕಾರಣ ಪುತ್ತೂರು ಶಾಸಕ ಅಭ್ಯರ್ಥಿಯಾಗಿ ನಮ್ಮಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ತಿಳಿಯ ಪಡಿಸಬೇಕು, ಯಾವುದೇ ಪಕ್ಷಪಾತ ಇಲ್ಲದೆ ಸಮಾಜದ ಎಲ್ಲಾ ಜಾತಿ ಸಮುದಾಯದ ಜನರೊಂದಿಗೆ ಹಾಗೂ ಯುವಕರನ್ನು ಒಗ್ಗೂಡಿಸಿ ಪಕ್ಷ ಕಟ್ಟುವ ಸಾಮರ್ಥ್ಯ ಹೊಂದಿರುವ ಒಬ್ಬ ಜನ ನಾಯಕ ಆಗಿರಬೇಕು.
ಪುತ್ತೂರು ಕಾಂಗ್ರೆಸ್ ಹೇಳುವಾಗಲೇ ಇಬ್ಬರ ಹೆಸರು 2 ಬಣ, ಅದು ಇರುವರೆಗೂ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ, ಆದ ಕಾರಣ ಆ 2 ಬಣವನ್ನು ಒಗ್ಗೂಡಿಸಿ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತರಲು ಸಾಮರ್ಥ್ಯ ಇರುವ ಒಬ್ಬರೇ ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ನೆಚ್ಚಿನ ಪ್ರಸನ್ನ ಕುಮಾರ್ ಶೆಟ್ಟಿ(ಸಿಝ್ಲರ್ ಪಚ್ಚು ಅಣ್ಣ) ಅವರು ಎಲ್ಲರಿಗೂ ಚಿರಪರಿಚಿತರು ಯಾಕೆಂದರೆ ಯಾವುದೇ ಜಾತಿ ಧರ್ಮ ನೋಡದೆ, ಯಾವುದೇ ಪಕ್ಷಪಾತ ಮಾಡದೆ ಎಲ್ಲಾ ಸಮುದಾಯದವರ ಜೊತೆಯಲ್ಲಿ ಅಮೂಲ್ಯವಾದ ನಂಟು ಹೊಂದಿಕೊಂಡಿರುವ ಸರಳ ವ್ಯಕ್ತಿತ್ವ.
ಹಾಗೆಯೇ ಪುತ್ತೂರು ತಾಲ್ಲೂಕಿನಲ್ಲಿ ಎಲ್ಲಾ ರಾಜಕೀಯ ಪಕ್ಷ ಹಾಗೂ ಎಲ್ಲಾ ಜಾತಿ ಸಂಘಟನೆಯಲ್ಲಿರುವ ಸಕ್ರಿಯ ಯುವಕರ ದೊಡ್ಡ ಯುವ ಸಮೂಹವನ್ನು ಹೊಂದಾಣಿಕೆಯೊಂದಿಗೆ ಒಗ್ಗೂಡಿಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ವ್ಯಕ್ತಿ. ನಾನು ಹಲವಾರು ಸಲ ಗಮನಿಸಿದ್ದೇನೆ, ಪಚ್ಚು ಅಣ್ಣ ನಡೆಸುವ ಯಾವುದೇ ಕ್ರೀಡಾಕೂಟ ಇರಲಿ, ಅವರ ಮುಖಂಡತ್ವದಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಎಲ್ಲಾ ಧರ್ಮದ ಯುವಕರು ಹಗಲಿರುಳು ಶ್ರಮಪಟ್ಟು ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅದೇ ರೀತಿ ಅವರ ನಾಯಕತ್ವದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಜಾತಿ ಧರ್ಮ, ಭೇದ ಭಾವ ಇಲ್ಲದೇ ಜನ ಸಮೂಹವೇ ಹರಿದು ಬರುತ್ತದೆ.
ಕೋಮು ಸೂಕ್ಷ್ಮವಾದ ಕರಾವಳಿ ಬಾಗದಲ್ಲಿ ಇವರಂತ ಕೆಚ್ಚೆದೆಯ ಜಾತ್ಯತೀತ ನಾಯಕನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ಸೋಲಿನ ಸುಳಿಯಲ್ಲಿ ಸಿಲುಕಿರುವ ಪುತ್ತೂರು ವಿದಾನಸಭಾ ಕ್ಷೇತ್ರಕ್ಕೆ ಇವರನ್ನು ಶಾಸಕ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬುವುದು ಹಲವು ಕಾರ್ಯಕರತರ ಅಭಿಪ್ರಾಯವಾಗಿದೆ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರದಂತಹ ಸಿದ್ದರಾಮಯ್ಯ ಸರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಡಿಕೆ. ಶಿವಕುಮಾರ್ ಸರ್ ಹಾಗೆ ಅನೇಕ ಹಿರಿಯ ನಾಯಕರು ಸೇರಿ ಶಾಸಕ ಅಭ್ಯರ್ಥಿಗಳನ್ನು ಆರಿಸುವಾಗ ಆಯಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಅವರ ಹಿನ್ನೆಲೆ ಅಧ್ಯಯನ ಮಾಡಿ ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಒಳಗಾಗದೆ ಜನರನ್ನು ಜಾತಿ ಭೇದ ಇಲ್ಲದೆ ಒಗ್ಗೂಡಿಸಿ, ಬಣ ರಾಜಕೀಯವನ್ನು ಕೊನೆಗೂಳಿಸುವ ಸಾಮರ್ಥ್ಯವನ್ನು ಹೊಂದಿರುವ ಮತ್ತು ಸಮಸ್ತ ನಾಡಿನ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ಸಮೂಹ ನಾಯಕನನ್ನು ಮುಂದೆ ತಂದು ಅವರಿಗೆ ಅವಕಾಶ ಮಾಡಿ ಕೊಟ್ಟರೆ ಖಂಡಿತವಾಗಿಯೂ ಭವಿಷ್ಯದ ಕನ್ನಡ ನಾಡಿನ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆ. ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ಕರ್ನಾಟಕದ ಅಭಿವೃದ್ಧಿಯನ್ನೇ ದ್ಯೇಯ ವಾಕ್ಯ ಮಾಡಿ ಮಾದರಿ ರಾಜ್ಯವಾಗಿ ಬೆಳಗಿಸಲಿ ಎಂದು ಆಶಿಸುತ್ತೇನೆ.
ನೊಂದ ಕಾರ್ಯಕರ್ತರ ಮನಸ್ಸನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರರು ಸರಿಪಡಿಸಲು ಮುಂದಾಗುತ್ತಾ ಕಾದು ನೋಡಬೇಕಿದೆ..
– ಎ.ಕೆ.ಅಶ್ವತ್ಥಡಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.