(www.vknews.in) : ಬಂಗಾಳಕೊಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇರುವುದರಿಂದ, ಮೀನುಗಾರರು ಮೀನುಗಾರಿಕೆಗೆ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಪುತ್ತೂರು,ಉಪ್ಪಿನಂಗಡಿ,ಕಡಬ ಸುಬ್ರಹ್ಮಣ್ಯ,ಸುಳ್ಳ,ಹರಿಹರ ಬೆಳ್ತಂಗಡಿ,ಧರ್ಮಸ್ಥಳ,ನಾರಾವಿ ಬಂಟ್ವಾಳ,ಸುರತ್ಕಲ್ ಮೂಡಬಿದಿರೆ ಪ್ರದೇಶದಲ್ಲಿ ಶನಿವಾರವು ಉತ್ತಮ ಮಳೆಯಾಗಿದೆ. ಕರಾವಳಿಗೆ ಇಂದು” ರೆಡ್ ಅಲರ್ಟ್” ಘೋಷಣೆಯಾಗಿದ್ದು 8 ಮತ್ತು 9ರಂದು “ಆರೆಂಜ್ ಅಲರ್ಟ್” ಘೋಷಣೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.