ಮಂಗಳೂರು (www.vknews.in) : ಮಲ್ಲಿಕಟ್ಟೆಯ ಸುಮಾ ಸಧನ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾದಳ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಸಮಾಜ ಸೇವಕಿ ಡಾ .ಸುಮತಿ ಹೆಗ್ಡೆಯ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನೆರವೇರಿಸಲಾಯಿತು. ಖ್ಯಾತ ನಾಟಕ ಕಲಾವಿದ , ಚಲನಚಿತ್ರ ಹಾಸ್ಯ ನಟರಾದಂತಹ ಸನ್ಮಾನ್ಯ ದೇವದಾಸ್ ಕಾಪಿಕಾಡ್ ಉಧ್ಛಾಟಿಸಿದರು. ದ.ಕ .ಜಿಲ್ಲೆ ಜೆಡಿಎಸ್ ಮಹಿಳಾ ಮಾಜಿ ಘಟಕಾಧ್ಯಕ್ಷೆ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರ ಅದ್ಯಕ್ಷೆ ಡಾ .ಸುಮತಿ ಹೆಗ್ಡೆ ಅಧ್ಯಕ್ಷತೆ ವಹಿಸಿದರು.
ಈ ಸಂಧರ್ಭ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಜನತಾ ದಳ ಅಧ್ಯಕ್ಷ ಜಾಕೆ ಮಾಧವಗೌಡ. ದ.ಕ.ಜಿಲ್ಲಾ ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ರಮೀಝಾ ನಾಸಿರ್, ದ.ಕ.ಜಿಲ್ಲಾ ಜೆಡಿಎಸ್ ಸೇವಾದಳ ಅಧ್ಯಕ್ಷ ನಝೀರ್ ಸಾಮಣಿಗೆ, ಕರ್ನಾಟಕ ಪ್ರ. ಜನತಾದಳ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮುಲ್ಕಿ, ಲತೀಫ್ ವಲಚ್ಚಿಲ್, ಸದಾಶಿವ ಹೆಗ್ಡೆ, ಇಕ್ಬಾಲ್ ಇಂಜಿನಿಯರ್ ಪರ್ಲಿಯಾ, ಲತೀಫ್ ಶಿವಭಾಗ್ ಉಪಸ್ಥಿತರಿದ್ದರು.
ದೇವದಾಸ್ ಕಾಪಿಕಾಡ್ , ವೀಣಾ ಶೆಟ್ಟಿ, ಸಾರಾ ಇಸ್ಮಾಯಿಲ್ , ಶೋಭಾ ರಾಣಿ ಬಲ್ಲಾಲ್ ಭಾಗ್ ರವರನ್ನು ಜನತಾದಳ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಚಂದ್ರಶೇಖರ್ ಮಂಗಳಾದೇವಿ ಸ್ವಾಗತಿಸಿದರು. ಅಲ್ತಾಫ್ ತುಂಬೆ ವಂದಿಸಿದರು.
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಸುಮತಿ ಹೆಗ್ಡೆ ಯವರ ಕರೆಯ ಮೇರೆಗೆ ನಿರೀಕ್ಷೆಗೂ ಮೀರಿ ಜನ ಸೇರಿರುವುದು ವಿಶೇಷವಾಗಿದೆ. ತುಳುನಾಡಿನ ಘತ ವೈಭವವನ್ನು ನೆನಪಿಸುವ ಹಲವು ಕಾರ್ಯಕ್ರಮಗಳು, ಮನರಂಜನೆಗಳು ಹಾಗೂ ಸಹೋದರತೆ, ಸಮಾನತೆ ಸಾರುವ ವಿನೋಧ ಕಾರ್ಯಕ್ರಮಗಳು ಆಟಿಡೊಂಜಿ ದಿನ ದ ವಿಶೇಷತೆಯಾಗಿತ್ತು. ಒಟ್ಟಾರೆ ಈ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ಡಾ.ಸುಮತಿ ಹೆಗ್ಡೆಗೆ ಸಲ್ಲಬೇಕು. ದ.ಕ. ಜಿಲ್ಲೆಯಲ್ಲಿ ಕೋಮು ವಿಷಬೀಜ ಬಿತ್ತುವ ಈ ಸಂಧರ್ಬದಲ್ಲಿ ಸೌಹಾರ್ದತೆ ಯನ್ನು ಎತ್ತಿ ಹಿಡಿಯುವ ಇಂತಹ ಕಾರ್ಯಕ್ರಮಗಳು ನಿಜವಾಗಿಯೂ ಸಮಯದ ಅವಶ್ಯಕತೆ ಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.