(www.vknews.in) : ಕೇರಳದ ಬೀದಿಗಿಳಿದು ಒಬ್ಬ ಪತ್ರಕರ್ತನನ್ನು ಕೊಂದ ವ್ಯಕ್ತಿಯ ಅಧಿಕಾರವನ್ನು 24 ಗಂಟೆಯೊಳಗೆ ಕೆಳೆಗಿಳಿಸಲು ಸಮರ್ಥ ಪ್ರತಿಭಟನೆಯಿಂದ ಸಾದ್ಯವಾದರೆ, ನ್ಯಾಯದ ಕದ ತಟ್ಟಲು ತಯಾರಾದರೆ ವೀರವೇಷವಾಗಿ ಹೋರಾಡಿ ಗೆಲ್ಲಲು ಸಾಧ್ಯ.
ಸಮಾಜದ ಒಳಿತಿಗಾಗಿ ಜೀವನದ ವೃದ್ದ ಕಾಲವನ್ನೂ ಕೂಡ ಮೀಸಲಿಡಲು ವಿಶಾಲ ಮನಸ್ಸನ್ನು ತೋರಿದ ಪಂಡಿತರ ಕೊನೆಯುಸಿರು ಯಾವುದೋ ರಾಕ್ಷಸರ ಕಯ್ಯಿಂದ ಕಡಲ ಕಿನಾರೆಯ ಬಂಡೆಗಳ ನಡುವೆ ವಿಲವಿಲನೆ ಒದ್ದಾಡುತ್ತಾ ಪ್ರಾಣ ಬಿಟ್ಟಿರುವ ಸತ್ಯಾಂಶವನ್ನು ಮರೆಮಾಚಲು ಎಷ್ಟೋ ದುಷ್ಟ ಶಕ್ತಿಗಳ ಕೈವಾಡದಿ ಸಾಧ್ಯವಾದರೆ, ಆ ದುಷ್ಟರನ್ನು ಸೆರೆಮನೆಗೊಯ್ದು ನ್ಯಾಯವನ್ನು ದೊರಕುವ ವರೆಗೆ ಹೋರಾಟವನ್ನು ನಡೆಸಬೇಕಾದದು ಅನಿವಾರ್ಯವಾಗಿದೆ.
ಕಳೆದ ೧೦ ವರ್ಷಗಳು ಉರುಳಿದರು ಆತ್ಮಹತ್ಯೆಯೆಂದು ಕಪ್ಪು ಮಸಿ ಬೆರೆಸಲು ಪ್ರಯತ್ನಿಸುತ್ತಿರುವುದು ಯಾರನ್ನು? ಆ ಮಹಾನರು ಯಾರೆಂದು ನಾವು ತಿಳಿದಿರಬೇಕು.
ಶಹೀದೆ ಮಿಲ್ಲತ್, ಧಾರ್ಮಿಕ ಪಂಡಿತರು, ಲೇಖಕರು ಸಾಹಿತಿಯೂ ಬಹುಭಾಷ ಪಂಡಿತರೂ ಸಂಘಟನಾ ಕೌಸಲ್ಯವಿರುವ, ಕುತೂಹಲ ಹುಮ್ಮಸ್ಸು ದಿಟ್ಟತನಗಳಂತಹ ಗುಣಗಳು ಮೇಲೈಸಿರುವ ಸಜ್ಜನಿಕೆಯ ಬದುಕಿನ ಮೂಲಕ ಜೀವನ ನಡೆಸಿ ನಮ್ಮಲ್ಲರಿಗೂ ಮಾದರಿಯಾಗಿದ್ದವರೇ “ಶಹೀದೇ ಮಿಲ್ಲತ್ ಶೈಖುನಾ ಸಿ.ಎಂ. ಉಸ್ತಾದ್(ಖ.ಸಿ) 1933ರಲ್ಲಿ ಪ್ರಮುಖ ಪಂಡಿತರೂ ಚೆಂಬರಿಕ ಖಾಝಿಯೂ ಆಗಿದ್ಧ ಸಿ.ಮುಹಮ್ಮದ್ ಕುಂಞ ಮುಸ್ಲಿಯಾರ್ ಬೀಪಾತಿಮ ಹಜ್ಜುಮ್ಮರ ಸುಪುತ್ರರಾಗಿ ಜನಿಸಿದರು. ಚೆಂಬರಿಕ ಹಾಗೂ ತಳಂಗರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕಾಸರಗೋಡು ಮುಸ್ಲಿಂ ಹೈಸ್ಕೂಲಿನಲ್ಲಿ SSLC ವಿದ್ಯಾಬ್ಯಾಸ ನಡೆಸಿ ವೆಲ್ಲೂರು ಬಾಖಿಯಾತ್ ಸ್ವಾಲಿಹಾತಿನಲ್ಲಿ ಮೌಲವಿ ಫಾಝಿಲ್ ಬಾಖವಿ ಪಡೆದರು.
ವಯಸ್ಸಿನಲ್ಲಿ ಹಿರಿಯವರಾದರೂ ಎಳೆವೆಯಾ ಹುರುಪು ಹುಮ್ಮಸ್ಸುಗಳನ್ನು ರಕ್ಷಿಸಿಕೊಂಡಿದ್ದ ಉಸ್ತಾದ್ ಜವಾಬ್ದಾರಿಯ ಮೇಲೆ ಶ್ರಧ್ಧೆ ಹಾಗೂ ಛಲವಂತಿಕೆ ಇರುವ ವ್ಯಕ್ತಿಯಾಗಿದ್ದರು. ಕ್ಲಿಷ್ಟ ಪರಿಸ್ಥಿಯಲ್ಲೂ ಸಮಸ್ಥಿತಿ ಕಾಪಾಡಿಕೊಂಡು ಬಂದಿದ್ದ ಅವರು ಆಶಾವಾದಿಗಳೂ ಧೀರ ಸಾಧಕ ನಿಲುವು ಮೇಲೈಸಿದವರೂ ಆಗಿದ್ದರು. ಪ್ರತಿ ವಿಷಯದಲ್ಲೂ ತಲಶ್ಪರ್ಶಿ ಅದ್ಯಯನ ನಡೆಸಿ ಜ್ಞಾನದ ವೈಶಾಲ್ಯತೆಯನ್ನು ಪಡೆದಿದ್ದರು. ಅತೀವ ಬುಧ್ಧಿವಂತರೂ ದೂರದೃಷ್ಟಿಯ ಎಲ್ಲಾ ಕಾರ್ಯಗಳಿಗೂ ಮುಂದೆಜ್ಜೆ ಹಾಕುವ ದಿಟ್ಟತನ ಅವರದ್ದು. ಅರಬಿ ಇಂಗ್ಲಿಷ್ ಉರ್ದು ಮಳಯಾಳಂ ಬಾಷೆಗಳಲ್ಲಿ ನಿಪುಣತೆ ಗಳಿಸಿದ್ದರು. ಖಗೋಳ ಶಾಸ್ತ್ರದ ಪಾಂಡಿತ್ಯ ಪಡೆದವರೂ ಆಗಿದ್ದರು.
ವಿಶ್ವದ ಮಹೋನ್ನತ ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾದ್ಯಕ್ಷರೂ, ಕಾಸರಗೋಡು ಜಿಲ್ಲಾ ಜಂಇಯ್ಯತುಲ್ ಉಲಮಾದ ಅದ್ಯಕ್ಷರೂ, ಕಾಸರಗೋಡು ಮಲಬಾರ್ ಇಸ್ಲೃಮಿಕ್ ಅಕಾಡೆಮಿಯ ಅದ್ಯಕ್ಷರೂ, ಚಟ್ಟಂಚಾಲ್ ದಾರುಲ್ ಇರ್ಶಾದ್ ಅಕಾಡೆಮಿಯ ಪ್ರಾಂಶುಪಾಲರೂ, ಸಮಸ್ತದ ಪತ್ವಾ ಕಮಿಟಿ ಸದಸ್ಯರೂ, ಕಾಸರಗೋಡು ಜಿಲ್ಲಾ ಸುನ್ನಿ ಮಹಲ್ಲ್ ಪಡೆರೇಷನ್ ಅದ್ಯಕ್ಷರೂ, ಮಂಗಳೂರು ಹಾಗೂ ಕಾಸರಗೋಡಿನ ಸುಮಾರು 100ರಷ್ಟು ಮಹಲ್ಲಿನ ಖಾಝಿಯಾಗಿ ಹುದ್ಧೆಯನ್ನು ಅಲಂಕರಿಸಿದ್ದರು.
ಮುಸ್ಲಿಂ ಸಮುದಾಯದ ಆಶಾ ಕೇಂದ್ರವಾಗಿದ್ದ ಶೈಖುನಾ ಸಿ.ಎಂ ಉಸ್ತಾದರು ಅಂದೊಂದು ದಿನ ಯಾವುದೋ ಪಾಪಿ ರಾಕ್ಷಸಿಗಳ ಕಣ್ಣಿಗೆ ಮುಳುವಾಗಿ ಈ ಲೋಕವನ್ನೇ ಅಗಲಿ ಪರಲೋಕ ಪಯಣ ಬೆಳೆಸಿದರು. ಉಸ್ತಾದರ ಕೊಲೆ ಸಮಾಜಕ್ಕೆ ತುಂಬಲಾಗದ ನಷ್ಟದ ಸಾಲಿಗೆ ಸೇರಿದೆ. ಆ ನೇತೃತ್ವಕ್ಕಾಗಿ ಇಂದೂ ಕೂಡ ಹಂಬಲಿಸದ ಮನಸ್ಸುಗಳಲಿಲ್ಲ. ಆದಷ್ಟೂ ಬೇಗ ಕತ್ತಲೆಯ ಮರೆಯಲ್ಲಿ ಅಡಗಿ ಕೂತ ರಾಕ್ಷಸಿ ಆರೋಪಿಗಳನ್ನು ಸಮಾಜವೇ ಬೆಳಕಿನ ಕಡೆಗೆ ಎಳೆದು ತಂದು ಸತ್ಯ ಹೊರಡಿಸಲಿದೆ.
ಕೆಲವರು ಆರೋಪಿಸುವ ಹಾಗೆ ಮರ್ಹೂಮ್ ಶೈಖುನಾ ಸಿ.ಎಂ ಉಸ್ತಾದ್ ಆತ್ಮಹತ್ಯೆ ಗೈಯ್ಯೂದೇ? ಇಲ್ಲ ಒಮ್ಮೆಯೂ ಆಪಂಡಿತ ತೇಜಸ್ಸಿನ ಮರಣವನ್ನು ಆ ರೀತಿ ಊಹಿಸಲು ಸಾದ್ಯವೇ ಇಲ್ಲ ಕರಾಳ ಕೈ ಗಳು ಇದರ ಹಿಂದೆ ಅಡಗಿ ಕಾರ್ಯಚರಿಸಿದೆ. ಆ ಸಮುದ್ರದಡೆಯಲ್ಲಿ ಶೈಖುನಾ ರವರ ಆ ಜನಾಝಾ ತೇಲಿದೆ ಮನಕುಲುಕುವ ದ್ರಶ್ಯ ಕಣ್ಣ ಮುಂದೆಯೇ ಹಾದು ಬರುತ್ತಿದೆ . ಸಿಬಿಐಯನ್ನೂ ಕೂಡ ಆ ಕರಾಳ ಕೈಗಳು ತನ್ನ ಕೈ ಗಳಲ್ಲಿ ಹಿಡಿದಿಟ್ಟಿದೆ .ಪೊಲೀಸ್ ಅಧಿಕಾರಿಗಳು ಹಲವು ಆಮಿಷಗಳಿಗೆ ಬಲಿಯಾಗಿದ್ದಾರೆ. ಇನ್ನೂ ಕೂಡ ಆ ಕೊಲೆ ಪ್ರಕರಣ ಭೇದಿಸಲು ಸಾಧ್ಯವಾಗಲಿಲ್ಲ ಸಾಕ್ಷಿಗಳಿದ್ದರೂ ಯಾತಕ್ಕಾಗಿ ಈ ರೀತಿಯಾಗುತ್ತಿದೆ.
ನಾವೂ ಇದರ ವಿರುದ್ಧ ಹೋರಾಡಲೇ ಬೇಕು ಅಧಿಕಾರಿ ವರ್ಗಗಳು ನಟಿಸುತ್ತಿರುವ ನಿದ್ರೆಯಿಂದ ಹೋರಾಟದ ಶಕ್ತಿಯಿಂದ ಅವರನ್ನು ಎಬ್ಬಿಸಬೇಕು .ಹಾಗಾದರೆ ಮಾತ್ರ ಆ ಪುಣ್ಯ ನಾಯಕರ ಕಾರ್ಯಕರ್ತರಾದ ನಮಗೆ ನೆಮ್ಮದಿ, ಅಲ್ಲಾಹನು ಅವನ ಜನ್ನಾತುಲ್ ಪಿರ್ದೌಸಿನಲ್ಲಿ ಶೈಖುನಾರೊಂದಿಗೆ ನಮ್ಮನ್ನು ಒಂದುಗೂಡಿಸಲಿ..ಆಮೀನ್
✍️ ಯಾಸರ್ ಉಮರ್ ತೋಡಾರ್ ( ಕೋಶಾಧಿಕಾರಿ, SKSSF ತ್ವಲಬಾ ವಿಂಗ್ ಕೊಡಗು ಜಿಲ್ಲೆ )
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.