ದುಬೈ(ವಿಶ್ವಕನ್ನಡಿಗ ನ್ಯೂಸ್): ಕೆ ಸಿ ಎಫ್ ದುಬೈ ನೋರ್ತ್ ಗಲ್ಫ್ ಇಶಾರ ಚಂದಾ ಅಭಿಯಾನ ಉದ್ಘಾಟನೆ ತಾಜುಲ್ ಫುಖಹಾ ಉಸ್ತಾದ್ ಸೆಂಟರ್ ನೈಫ್ ನಲ್ಲಿ ನಡೆಯಿತು.
ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಝೋನ್ ಇಹ್ಸಾನ್ ಅಧ್ಯಕ್ಷರಾದ ಇಬ್ರಾಹೀಂ ಮದನಿ ಉಸ್ತಾದ್ ದುಆ ಮಾಡಿದರು ಸಂಘಟನಾ ವಿಭಾಗದ ಕಾರ್ಯದರ್ಶಿ ಮುಸ್ತಫ ಮಾಸ್ಟರ್ ಉಳ್ಲಾಲ ಸ್ವಾಗತಿಸಿದರು.
ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲಿಂಗ್ ಫೈನಾನ್ಸಿಯಲ್ ಕಂಟ್ರೋಲರ್ ಹಮೀದ್ ಸಹದಿ ಈಶ್ವರಮಂಗಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಶಾಹುಲ್ ಹಮೀದ್ ಸಖಾಫಿ ಇಶಾರದ ಅಭಿಯಾನ ಯೋಜನೆ ವಿವರಣೆಯನ್ನು ನೀಡಿದರು. ರಾಷ್ಟ್ರೀಯ ಸಮಿತಿಯ ಝೋನ್ ಮೇಲ್ವಿಚಾರಕರಾದ ರಿಫಾಈ ಗೂನಢ್ಕ ಮೇಲ್ನೋಟದಲ್ಲಿ ಝೋನ್ ಮಟ್ಟದ ಗಲ್ಫ್ ಇಶಾರ ಅಭಿಯಾನದ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಹಂಝ ಸಖಾಫಿ ಕೊಟ್ಟಮುಡಿ, ಕನ್ವೀನರಾಗಿ ಅಬ್ಬಾಸ್ ಮಂಜನಾಡಿ ಹಾಗೂ ಫೈನಾನ್ಶಿಯರಾಗಿ ಆಸಿಫ್ ಸೂರಿಕುಮೇರು ಮತ್ತು ಐಟಿ ಇಂಚಾರ್ಜ್ ಆಗಿ ಹಬೀಬ್ ಸಜೀಪ ರವರುಗಳನ್ನು ಆಯ್ಕೆಮಾಡಲಾಗಿದೆ. ಸೆಕ್ಟರ್ ಕೋಡಿನೇಟರ್ ಗಳಾಗಿ ನೈಫ್ : ಅಬ್ದುಲ್ ಘನಿ ಉಳ್ಳಾಲ ನಕೀಲ್ : ಮಜೀದ್ ಹಾಜಿ ಉಚ್ಚಿಲ ಹೋರ್ಲಂಝ್ : ಸ್ವಾದಿಕ್ ಬಜಾಲ್ ಕಿಸೈಸ್ : ಜಾಫರ್ ಕೊಂಡಂಗೇರಿ ಅಲ್ ಮುರಾರ್ : ನವಾಝ್ ಕೆ ಸಿ ರೋಡ್
ಕಾರ್ಯಕ್ರಮದಲ್ಲಿ ಅಬುಧಾಬಿ ಝೋನ್ ಕೋಶಾಧಿಕಾರಿ ನವಾಝ್ ಹಾಜಿ ಕೋಟೆಕಾರ್, ಝೋನ್ ಪ್ರದಾನ ಕಾರ್ಯದರ್ಶಿ ನಿಯಾಝ್ ಬಸರ, ಝೋನ್ ಕ್ಯಾಬಿನೆಟ್ ನಾಯಕರಾದ ಲತೀಫ್ ಪಾತೂರ್, ಹಮೀದ್ ಸಖಾಫಿ ವಿಟ್ಲ, ರಿಯಾಝ್ ಕೊಂಡಂಗೇರಿ, ಶುಕೂರ್ ಮಣಿಲ, ಸೆಕ್ಟರ್ ನಾಯಕರಾದ ಅಬ್ದುಲ್ಲಾ ಸಖಾಫಿ ಕೊಟ್ಟಮುಡಿ, ಮಜೀದ್ ಮರಿಕ್ಕಳ, ಸಹದ್ ಕೊಳಿಯೂರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಝೋನ್ ಆಡಳಿತ ವಿಭಾಗದ ಕಾರ್ಯದರ್ಶಿ ಹಬೀಬ್ ಸಜೀಪ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.