(www.vknews.in) : ದಿ|| ಪಿ ಮೊಹಮ್ಮದ್ ಹಟ್ಟಾರವರು ನಿಧನರಾಗಿ ಅಗೋಸ್ಟ್, 11, 2022 (23rd Ramadan) ಸುಮಾರು 11 ವರ್ಷ, ಇವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಅತ್ಯುನ್ನತವಾದ ಸಾಧನೆಗಳನ್ನು ಮಾಡಿಕೊಂಡು ಸರ್ವಧರ್ಮದ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ತನ್ನ ಜೀವನವನ್ನು ಮುಡಿಪಾಗಿಸಿ, ಪುತ್ತೂರಿನ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಸಧಾ ಮುಂಚೂಣಿಯಲ್ಲಿ ಪ್ರಯತ್ನಿಸಿದವರು, ತನ್ನಲ್ಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಗೂ ಸ್ವತಃ ನಿಂತು ಕೆಲಸ ಕಾರ್ಯವನ್ನು ಮಾಡಿ ಕೊಟ್ಟವರು, ಇವರು ಎಲ್ಲಾ ಪಕ್ಷದವರ ಪ್ರೀತಿ ಗಳಿಸಿದ ಪುತ್ತೂರಿನ ಗಾಂಧಿ ಎಂದೇ ಹೇಳಬಹುದಾದ ಸರಳ ವ್ಯಕ್ತಿತ್ವವನ್ನು ಹೊಂದಿದ್ದರು.
ದಿ|| ಪಿ ಮೊಹಮ್ಮದ್ ಹಟ್ಟಾರವರು, ಪುತ್ತೂರಿನ ನಗರ ಯೋಜನಾ ಪ್ರಾಧಿಕಾರ (PUDA)ದ ಪ್ರಥಮ ಅದ್ಯಕ್ಷರಾಗಿ, ದಕ್ಷಿಣ ಕನ್ನಡ-ಉಡುಪಿ ಪರಿಷತ್ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯಲ್ಲಿ ಸತತ 9 ವರ್ಷ ಪ್ರಧಾನ ಕಾರ್ಯದರ್ಶಿಯಾಗಿ, ಸೀರತ್ ಕಮಿಟಿ ಪ್ರಧಾನ ಕಾರ್ಯದರ್ಶಿಯಾಗಿ, ಹಾಗೆ ಹಲವು ಸಂಘ ಸಂಸ್ಥೆ, ಮಸೀದಿ ಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ 2ನೇ ಮಗನಾದ ರಮೀಝ್ ಹಟ್ಟಾ ಆಪ್ತ ಸಹಾಯಕ ನಾಗಿ ಮಾನ್ಯ ಶ್ರೀ ವಿನಯ್ ಕುಮಾರ್ ಸೊರಕೆ ಹಾಗೂ ಶ್ರೀ ಯು.ಟಿ ಖಾದರ್ ರವರು ಜೊತೆಯಲ್ಲಿ ಸೇರಿಸಿ ಇವರ ನೆನಪನ್ನು ಸದಾ ಉಳಿಸಿಕೊಂಡಿದ್ದಾರೆ.
Bio-Data of Shri Late P Mohammed Hatta
*”Party Worked”,
(1975-1980) INTUC Worker
“Elected Post”,
“Social Organisation”,
“Government Nominated Post”,
ಇವರ ಸರಳ ಜೀವನದ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿದ ಹಾಗೂ ಎಲ್ಲಾ ಪಕ್ಷದವರ ವಿಶ್ವಾಸವನ್ನು ಗಳಿಸಿ ಹಾಗೂ ಎಲ್ಲಾ ಜಾತಿ ವರ್ಗದ ಜನರ ಕಣ್ಣೀರೊರೆಸುವ ಕೆಲಸ ಮತ್ತು ಸಮಾಜದ ಸೇವಕರಾಗಿ ಹಲವು ಸಮಾಜ ಸೇವೆಯಲ್ಲಿ ತೊಡಗಿಕೊಂಡವರಾಗಿದ್ದರು, ಇವರ ನೆನಪು ಜನರು ಎಂದೂ ಮರೆಯಲು ಅಸಾಧ್ಯ ಎಂದೇ ಹೇಳಬಹುದು.
ಈ ದಿವಸ ದಿ|| ಪಿ ಮೊಹಮ್ಮದ್ ಹಟ್ಟಾರವರನ್ನ ಪುಣ್ಯ ಸಂಸ್ಕರಣೆಯ ಮೂಲಕ ನೆನಪಿಸಿಕೊಳ್ಳೋಣ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.