ಅಬುಧಾಬಿ (www.vknews.in) : ಪ್ರವಾದಿ ಮುಹಮ್ಮದ್ (ಸ ಅ )ಮಾನವೀಯತೆಯ ಮಹಾನಾಯಕ ಎಂಬ ಶಿರ್ಷಿಕೆಯಡಿಯಲ್ಲಿ ನಡೆಯಲಿರುವ ಬೃಹತ್ ಮೀಲಾದ್ ಸಮಾವೇಶಕ್ಕೆ ನೂತನ ಸ್ವಾಗತ ಸಮಿತಿ ರಚಿಸಲಾಯಿತು. ಕಾರ್ಯಕ್ರಮದಲ್ಲಿ ಕಬೀರ್ ಬಾಯಂಬಾಡಿ ಸ್ವಾಗತಿಸಿ, ಅಂತಾರಷ್ಟ್ರೀಯ ಕೆಸಿಏಫ್ ನಾಯಕರಾದ ಅಬ್ದುಲ್ ಹಮೀದ್ ಸಅದಿ ಉದ್ಘಾಟಿಸಿದರು, ಹಸೈನಾರ್ ಅಮಾನಿ ಅದ್ಯಕ್ಷತೆ ವಹಿಸಿದ್ದರು.
ನೂತನ ಸಮಿತಿ ಕೆಳಗಿನಂತೆ ಘೊಷಿಸಲಾಯಿತು.. ಚೆಯರ್ಮಾನ್ : ಇಂಜಿನಿಯರ್ ಮನ್ಸೂರ್ ಚಿಕ್ಕಮಂಗಳೂರು ಜನರಲ್ ಕನ್ವೀನರ್ : ಹಕೀಂ ತುರ್ಕಳಿಕೆ ಟ್ರೆಶರರ್: ರಝಾಕ್ ಹಾಜಿ ವೈಸ್ ಚೆರ್ಮಾನ್ : ಮುಹಮ್ಮದ್ ಅಲಿ ಬ್ರೈಟ್ , ಅಡ್ಕ ಹಾಜಿ, ಇಕ್ಬಾಲ್ ಕುಂದಾಪುರ, ಮೇಲುಸ್ತುವಾರಿಯಾಗಿ ಹಾಜಿ ಇಬ್ರಾಹಿಂ ಬ್ರೈಟ್ ಮಾರ್ಬಲ್, ಹಾಗೂ ಜನಾಬ್ ಹಮೀದ್ ಪಿ ಎಂ ಹೆಚ್ , ಅಬ್ದುಲ್ ಹಮೀದ್ ಸಅದಿ, ಇಬ್ರಾಹಿಂಸಖಾಫಿ ಕೆದುಂಬಾಡಿ ಇವರನ್ನೊಳಗೊಂಡ ಸಲಹಾ ಸಮಿತಿಯನ್ನು ಆರಿಸಲಾಯಿತು.
ಕೆಸಿಎಫ್ ಅಬುಧಾಬಿ ವತಿಯಿಂದ ನಡೆಯುವ ಪ್ರಸ್ತುತ ಬೃಹತ್ ಮೀಲಾದ್ ಸಮಾವೇಶವು ಒಕ್ಟೊಬರ್ 16,2022 ರಂದು ಇಸ್ಲಾಮ್ ಸೆಂಟರ್ ಅಬುಧಾಬಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮೌಲಾನ ಅನಸ್ ಅಮಾನಿ ಮುಖ್ಯ ಪ್ರಬಾಷಣ ಮಾಡಲಿರುವರು. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಘಟನಾ ನೇತಾರರು, ಉಲಮಾ, ಸಾದಾತ್ ಗಳೂ ಮತ್ತು ಸಾಮಾಜಿಕ ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಬಾಗವಹಿಸಲಿರುವರು ಎಂದು ಕೆಸಿಎಫ್ ಅಬುಧಾಬಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.