ಮಂಗಳೂರು (www.vknews.in) : ಸಮಾಜದ್ರೋಹಿ ಚಟುವಟಿಗಳ ಮೂಲಕ ಸಮಾಜದ ಸ್ವಾಸ್ಥ ಕೆಡಿಸುವ ಪುನೀತ್ ಕೆರೆಹಳ್ಳಿ ಮೈಸೂರಿನ ಹುಲಿ ಶಹೀದೇ ಮಿಲ್ಲತ್ ಹಝ್ರತ್ ಟಿಪ್ಪು ಸುಲ್ತಾನ್ (ರ) ರವರ ಬ್ಯಾನರನ್ನು ಹರಿಯುವ ಮೂಲಕ ದೇಶದ್ರೋಹದ ಕೃತ್ಯ ಮಾಡಿದ್ದಾರೆಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ಗೌರವ ಡಾಕ್ಟರೇಟ್ ಪುರಸ್ಕೃತ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆರೋಪಿಸಿದ್ದಾರೆ.
ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಗ್ಗಳಿಕೆಯಿರುವ ಕೊಲ್ಲೂರು, ಶೃಂಗೇರಿ ಸಹಿತ ನೂರಾರು ದೇವಾಲಯಗಳನ್ನು ಆಕ್ರಮಣಕಾರರಿಂದ ರಕ್ಷಿಸಿದ ಹಿಂದೂ ಮುಸ್ಲಿಂ ಐಕ್ಯತೆಯ ರಾಯಭಾರಿ ಟಿಪ್ಪು ಸುಲ್ತಾನ್ ರಿಗೆ ಮಾಡಿರುವ ಅವಮಾನ ಭವ್ಯ ಭಾರತ ದೇಶಕ್ಕೆ ಮಾಡಿದ ಅವಮಾನಕ್ಕೆ ಸಮಾನವಾಗಿದೆ. ಸದಾ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಸೃಷ್ಟಿಸಿ ರಾಜ್ಯದ ಸಾಮರಸ್ಯ ಪರಂಪರೆಗೆ ಕೊಳ್ಳಿಯಿಡುತ್ತಿರುವ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.