ಉಳ್ಳಾಲ (www.vknews.in) ; ಕೆ ಸಿ ರೋಡ್ ಎಸ್ಎಮ್ಎ ತಲಪಾಡಿ ರೀಜಿನಲ್ ಇದರ ವಾರ್ಷಿಕ ಕೌನ್ಸಿಲ್ ಹಾಗೂ ಉಳ್ಳಾಲ ಝೋನಲ್ ನಾಯಕರ ರೀಜಿನಲ್ ಸಂದರ್ಶನ ಆಗಸ್ಟ್ 14 ಆದಿತ್ಯವಾರ ಸಂಜೆ 2:30ಕ್ಕೆ ಕೆಸಿ ರೊಡ್ ಮದ್ರಸ ಹಾಲ್ ನಲ್ಲಿ ಜರುಗಿತು. ಎಸ್ಎಮ್ಎ ರೀಜನಲ್ ಅದ್ಯಕ್ಷ, ಜನಾಬ್ ಕೆಎಂ ಅಬ್ಬಾಸ್ ರವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಾರ್ಯದರ್ಶಿ ಮಸೂದ್ ಬಾಹಸನಿ ಸ್ವಾಗತಿಸಿದರು.
ಬಹು, ಮುನೀರ್ ಸಖಾಫಿ ಕೆಸಿರೋಡ್ ಉದ್ಘಾಟನೆ ನೆರವೇರಿಸಿದರು. ಎಸ್,ಎಮ್,ಎ. ರಾಜ್ಯಸಮಿತಿಯಿಂದ ಟ್ರೈನರಾಗಿ ಆಗಮಿಸಿದ ಬಹು ಬದ್ರುದ್ದೀನ್ ಆಹ್ ಸನಿ ಕ್ಲಾಸ್ ಮಂಡಿಸಿದರು. ಎಸ್ ಎಂ ಎ ಉಳ್ಳಾಲ ಝೋನಲ್ ನೆತಾರರಾದ ಮೊಯಿದಿನ್ಕುಂಞಿ (ಬಾವುಚ್ಚ), ಹನೀಫ್ ಸಅದಿ ಬದ್ಯಾರ್, ಇಸ್ಮಾಯಿಲ್ ಕಿನ್ಯ ಭಾಗವಹಿಸಿದ್ದರು. ಹದಿನಾರು ಮೊಹಲ್ಲಾದ ಸುಮಾರು ಎಂಬತ್ತು ಸದಸ್ಯರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಮೊಹಲ್ಲಾ ವಿಧ್ಯಾರ್ಥಿಗಳ ಸಮವಸ್ತ್ರ ವಿತರಿಸಲಾಯಿತು. ಕೆ ಎಮ್ ಫಾರೂಕ್ ಬಟ್ಟಪ್ಪಾಡಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.