(ವಿಶ್ವ ಕನ್ನಡಿಗ ನ್ಯೂಸ್) : ಬಸ್ಸ್ ಹಾಗೂ ರೈಲ್ವೇಗಳಲ್ಲಿ ಪ್ರಯಾಣಿಸುವಾಗ ನಾವು ಮಹಿಳೆಯರಿಗೆ, ಪುರುಷರಿಗೆ, ವೃದ್ದರಿಗೆ, ವಿಶೇಷ ಚೇತನರಿಗೆ ಎಂದು ಸರ್ಕಾರವು ಈಗಾಗಲೇ ಪ್ರತ್ಯೇಕವಾದ ಆಸೀನವನ್ನು ನೀಡಿರುವಾಗ, ಮಂಗಳಮುಖಿಯರಿಗೂ ನೀಡಲು ಅವಕಾಶ ಮಾಡಿಕೊಟ್ಟಾಗ ಮಾತ್ರ ಲಿಂಗ ಅಸಮಾನತೆಯನ್ನು ನಿವಾರಿಸಬಹುದು.
ಈ ಬಗ್ಗೆ ಸರ್ಕಾರವು ಪ್ರತ್ಯೇಕ ಶೌಚಾಲಯದ ಕಡೆಗೆ ಗಮನ ವಹಿಸುವುದರ ಜೊತೆಗೆ, ಅವರು ಪ್ರಯಾಣಿಸುವಾಗಲೂ ಸ್ಥಳಗಳನ್ನು ಕಾಯ್ದಿರಿಸಲಿ. ಸರ್ಕಾರದಿಂದ ಈಗಾಗಲೇ ಮಂಗಳ ಮುಖಿಯರಿಗೆ ಪ್ರತಿ ಉದ್ಯೋಗ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಮಾನಗಳನ್ನು ಕಲ್ಪಿಸಿರುವುದು ನಿಜಕ್ಕೂ ಸಂತಷದ ಸಂಗತಿಯಾಗಿದೆ. ಅಲ್ಲದೆ ಸಮಾಜವು ಸಹ ಅವರನ್ನು ಅಷ್ಟೇ ಸಮಾನವಾಗಿ ಕಾಣಬೇಕು, ಆಗ ಮಾತ್ರ ಸಮಾನತೆಯನ್ನು ಸಾಧಿಸಿದಲು ಸಾಧ್ಯ,
ಸರ್ಕಾರವೇ ಇವರಿಗೆ ಪ್ರೇರಣೆ ನೀಡುವಾಗ ಸಮಾಜವು ಇದರಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕಾಗುತ್ತದೆ. ಮುಂದೆಯಾದರೂ ಸರ್ಕಾರವು ಇವರ ಬಗ್ಗೆ ಕೆಲವೊಂದು ಉತ್ತಮ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅವರಿಗೆ ಸುಭದ್ರವಾದ ನೆಲೆಯನ್ನು ನೀಡಬೇಕು.
ಜ್ಯೋತಿ.ಜಿ ಉಪನ್ಯಾಸಕಿ, ಮೈಸೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.