ಚಳ್ಳಕೆರೆ (www.vknews.in) ; ದೇವಿಯ ದರ್ಶನ ಪಡೆಯಲು ಬರುವ ನೂರಾರು ಭಕ್ತರಿಗೆ ತಂಗಲು ಯಾತ್ರಿ ನಿವಾಸ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿದ್ದರೆ ದೇವಾಸ್ಥಾನದಲ್ಲಿರುವ ಹುಂಡಿಯ ಹಣವನ್ನು ತಾಲೂಕು ಆಡಳಿತ ವಶಕ್ಕೆ ನೀಡುವುದಿಲ್ಲ ಎಂದು ವಕೀಲ ಹಾಗೂ ಗ್ರಾಪಂ ಸದಸ್ಯ ಶಶಿಕುಮಾರ್ ಅಕ್ರೋಶ ಹೊರಹಾಕಿದ್ದಾರೆ.
ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಗೌರಸಮುದ್ರ ಗ್ರಾಮದ ಗ್ರಾಮದೇವತೆ ಹಾಗೂ ಬುಡಕಟ್ಟು ಸಂಸ್ಕೃತಿಯ ಆರಾಧ್ಯ ಶ್ರೀ ಗೌರಸಮುದ್ರ ಮಾರಮ್ಮದೇವಿಯ ಪುಣ್ಯಕ್ಷೇತ್ರ ಸೌಲಭ್ಯಗಳಿಂದ ವಂಚಿತವಾದ ಗ್ರಾಮದಕಥೆ.
ಚಳ್ಳಕೆರೆ ತಾಲೂಕುಕೇಂದ್ರದಿAದ ಸುಮಾರು ೪೦ ಕಿ.ಮೀ ದೂರವಿರುವ ಆಂಧ್ರದ ಗಡಿ ಗ್ರಾಮವಾದ ಗೌರ ಸಮುದ್ರ ಗ್ರಾಮದಲ್ಲಿ ನೆಲೆಸಿರುವ ಭಕ್ತಾದಿಗಳ ಆರಾಧ್ಯದೇವತೆ ಮಧ್ಯಾಹ್ನದ ಮಾರಮ್ಮಎಂದುರಾಜ್ಯಾದ್ಯAತ ಹೆಸರುವಾಸಿಯಾದ ಶ್ರೀ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕಿಗೌರಸಮುದ್ರ ಮಾರಮ್ಮದೇವಿಯ ಸು ಕ್ಷೇತ್ರವಾಗಿದ್ದು ಈ ದೇವಿಯಇತಿಹಾಸವು ಸುಮಾರು ೫೦೦ ವರ್ಷಗಳ ಕಾಲ ಇತಿಹಾಸ ಹೊಂದಿದ್ದು ನಂಬಿಕೆಯಿAದ ಭಕ್ತಿಯಿಂದ ಪೂಜಿಸಿದರೆ ದೇವತೆ ಸಕಲ ಕಷ್ಟನಷ್ಟಗಳನ್ನು ಈಡೇರಿಸಿ ಆರೋಗ್ಯಆಯುಸ್ಸು ನೀಡಿ ಸಮಸ್ಯೆಗನ್ನು ಪಾಪಗಳನ್ನು ಪರಿಹಾರ ಮಾಡುತ್ತಾಳೆ ಎಂಬ ನಂಬಿಕೆ ಜನರ ಮನಲ್ಲಿದೆ.
ದೇವಿಯದರ್ಶನ ಪಡೆಯಲು ನೆರೆಯ ಆಂದ್ರ, ತೆಲಾಂಗಣ ಸೇರಿದಂತೆರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ ದೇವಿಯದರ್ಶನ ಪಡೆಯಲು ಬರುವ ಭಕ್ತರಿಗೆ ರಸ್ತೆಗಳ ಅಭಿವೃದ್ಧಿಕಾಣದೆ ಎಷ್ಟೋ ವರ್ಷಗಳು ಕಳೆದಿವೆ. ಜಾತ್ರೆಯು ವರ್ಷದ ಮೊದಲನೇ ಭಾದ್ರಪದ ಮಾಸದಲ್ಲಿ ಅದ್ದೂರಿಯಾಗಿ ಸುಮಾರು ನಾಲ್ಕರಿಂದ ಐದು ಲಕ್ಷ ಭಕ್ತಾದಿಗಳ ಸಮೂಹದಲ್ಲಿ ಜಾತ್ರೆಯು ಒಂದು ವಾರಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ ಈ ಒಂದುದೇವಿಯ ವಾರ್ಷಿಕ ವರಮಾನವು ಸುಮಾರು ೧೫ ರಿಂದ ೨೦ ಲಕ್ಷ ರೂಗಳು ಸಂಗ್ರಹವಾಗುತ್ತದೆ ಹಣವನ್ನುತಾಲೂ ಕು ಆಡಳಿತ ಮತ್ತು ಜಿಲ್ಲಾಡಳಿತ ಬಂದುತೆಗೆದುಕೊAಡು ಹೋಗುತ್ತದೆಇದುವರೆಗೂ ಹಣದ ಲೆಕ್ಕ ನೀಡಿಲ್ಲ ಮತ್ತುಎಲ್ಲಿದೆಅನ್ನೋ ಮಾಹಿತಿ ನಿಗೂಢವಾಗಿದೆ .
ದೇವಿಯದರ್ಶನ ಪಡೆಯಲು ಬರುವ ಭಕ್ತರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಗೃಹಗಳಿಲ್ಲದೆ ಮಹಳೆಯರು ಬಹಲಿನಲ್ಲಿತಮ್ಮ ಸೀರೆಯ ಮರೆಯಲ್ಲಿ ಸ್ನಾನ ಬಯಲಿನಲ್ಲಿ ಮಹಿಳೆಯರು ಮಕ್ಕಳು ನಿದ್ರೆಮಾಡುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದ್ದರೂ ಸಹ ಇಲ್ಲಿನಆಧಾಯ ಬೇಕು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಎರಡು ಬಾರಿ ಸಚಿವ ಹಾಗೂ ಜಿಲ್ಲಾಉಸ್ತುವರಿಸಚಿವರಾದರೂ ಪುಣ್ಯಕ್ಷೇತ್ರದಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ ಅದೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿ ಸಂಪೂರ್ಣಕ್ಷೇತ್ರದಅಭಿವೃದ್ಧಿಗೆ ಸಂಪೂರ್ಣ ನಿರ್ಲಕ್ಷವಹಿಸಿದ್ದಾರೆ.
ಜಾತ್ರೆ ಕೆಲವೇ ದಿನಗಳು ಬಾಕಿ ಇದ್ದರೂ ಸಹ ಜಾತ್ರೆಗೆ ಬರುವ ಎಲ್ಲಾ ಮಾರ್ಗದ ರಸ್ತೆಗಳು ಗಿಡಗೆಂಟೆಗಳು ಬೆಳೆದು ರಸ್ತೆಗೆ ಚಾಚಿಕೊಂಡು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ ಇನ್ನು ದುರಸ್ಥಿಯಾವಾಗ ಮಾಡುತ್ತಾರೆ ಎಂಬ ಅನುಮಾನುಗಳು ಕಾಡುತ್ತಿವೆ ದೇವಿಯ ದರ್ಶನ ಪಡೆಯಲು ಬರುವ ಭಕ್ತರಿಗೆ ಅಗತ್ಯ ಮೂಲ ಭೂತ ಸೌಲಣನ್ನು ಕಲ್ಪಿಸದಿದ್ದರೆ ಹುಂಡಿ ಹಣ ತೆಗೆಯಲು ಬಿಡುವುದಿಲ್ಲ ಗ್ರಾಮಸ್ಥರು ಪ್ರತಿಭಟನೆ ಮಾಡುವದಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳೀತಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.