ಅಮ್ಮೆಂಬಳ(ವಿಶ್ವಕನ್ನಡಿಗ ನ್ಯೂಸ್): ಆಗಸ್ಟ್ 15 ರ ಸ್ವಾತಂತ್ರ್ಯದ 75 ವರ್ಷ ಪೂರ್ತಿಯಾದ ನಿಟ್ಟಿನಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವು ಇತಿಹಾಸವುಳ್ಳ ಅಮ್ಮೆಂಬಳದ 4 ಕಡೆಗಳಲ್ಲಿ ನಡೆಯಿತು.
ಕೇಂದ್ರ ಜುಮಾ ಮಸೀದಿಯ ಧ್ವಜಾರೋಹಣ ಸರಿಯಾಗಿ 7 ಗಂಟೆಗೆ ನೂರುಲ್ ಹುದಾ ಕೇಂದ್ರ ಮದ್ರಸದ ವಠಾರದಲ್ಲಿ ಸ್ಥಳದ ಖತೀಬ್ ಅಮೀರ್ ಅಸ್ಸಖಾಫ್ ತಂಙಳ್ ಅಮ್ಮೆಂಬಳ ಧ್ಜಜಾರೋಹಣ ನೆರವೇರಿಸಿದರು.
ಸದರ್ ಉಸ್ತಾದ್ ಜಲೀಲ್ ಮದನಿ ಸಂದೇಶ ಸಾರಿದರು.ನಂತರ SYS SSF ಅಮ್ಮೆಂಬಳ ಶಾಖೆಯ ವತಿಯಿಂದ ಹನೀಫ್ BIT ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ತಂಜೀದ್ ಅಮ್ಮೆಂಬಳ ರವರ ಸಂದೇಶದೊಂದಿಗೆ ನಡೆಯಿತು.ಹೆಲ್ಪ್ ಲೈನ್ ಅಮ್ಮೆಂಬಳ ಇದರ ವತಿಯಿಂದ ಕೂಡ ಧ್ವಜಾರೋಹಣ ಉಬೈದ್ BH ರವರ ಅಧ್ಯಕ್ಷತೆಯಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಸಿರಾಜುದ್ದೀನ್ ಅಮ್ಮೆಂಬಳ ಹಾಗೂ ಚಿಂತಕರಾದ ರಹ್ ಮಾನ್ ಮಠ ರವರು ದೇಶದ ಪ್ರಸಕ್ತ ಸ್ಥಿತಿಗತಿ ಬಗ್ಗೆ ವಿವರಿಸಿದರು.
ನಮ್ಮೂರಿಗೆ ಹೆಮ್ಮೆ ತಂದ 10,12ರ ವಿಧ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ನಾಲ್ಕನೇ ದ್ವಜಾರೋಹಣವು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಖೆ ಅಮ್ಮೆಂಬಳಲ್ಲಿ ಸಿದ್ದೀಕ್ ಕೋಟೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಒಗ್ಗಟ್ಟಿನೊಂದಿಗೆ ಊರಿನ ಸರ್ವ ಮುಸ್ಲಿಂ ಬಾಂಧವರೂ ನೇತ್ರ ಸಾಕ್ಷಿಗಳಾಗಿದ್ದರು. ಸಿಹಿ ತಿಂಡಿಯು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.