ಪಟ್ಟಿಕ್ಕಾಡ್(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ವಿದ್ಯಾ ಕೇಂದ್ರ ಪಟ್ಟಿಕ್ಕಾಡ್ ಜಾಮಿಅ ನೂರಿಯ ಅರೇಬಿಕ್ ಕಾಲೇಜಿನಲ್ಲಿ ೭೫ನೇ ಸ್ವಾತಂತ್ರ್ಯ ದಿನಾಚರಣೆಯು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾಲೇಜು ಪ್ರಾಂಶುಪಾಲರು ಹಾಗೂ ಸಮಸ್ತ ಕೇರಳ ಜಂಇಯತುಲ್ ಉಲಮಾ ದ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಶೈಖುಲ್ ಜಾಮಿಅ ಪ್ರೊಫೆಸರ್ ಕೆ ಆಲಿಕ್ಕುಟ್ಟಿ ಮುಸ್ಲಿಯಾರ್ ದ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ್ ಎಂಎಲ್ಎ ರವರು ಶುಭ ನುಡಿ ಹೇಳಿದರು. ಮತ್ತು ಕಾಲೇಜಿನ ಪ್ರೊಫೆಸರ್ ಉಸ್ತಾದ್ ಅಬ್ದುಲ್ಲಾಹ್ ಮುಜ್ತಬ ಫೈಝಿ ರವರು ಮುಖ್ಯ ಭಾಷಣ ಮಾಡಿದರು.ಕಾರ್ಯಕ್ರಮವನ್ನು ಅಲ್ಲಾಮಾ ಇಕ್ಬಾಲ್ ರವರ ಸಾರೆ ಜಹಾನ್ಸೆ ಅಚ್ಚಾ ಗೀತೆಯೊಂದಿಗೆ ಕೊನೆಗೊಳಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.