ಕೆಮ್ಮಾನ್ ಕಜೆ(ವಿಶ್ವಕನ್ನಡಿಗ ನ್ಯೂಸ್): ಆಗಸ್ಟ್15 ಕೆಮ್ಮಾನ್ ಕಜೆ ಜಮಾಅತ್ ನ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಲಾಯಿತು. ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿ ದುಆ ನೆರವೇರಿಸಿ ಮುಖ್ಯ ಭಾಷಣ ಮಾಡಿದರು.
ಅಧ್ಯಕ್ಷರಾದ ಕೆ ಎಸ್ ಮುಹಮ್ಮದ್ ಹಾಜಿ ದ್ವಜಾರೋಹನ ಮಾಡಿ ಮಾತನಾಡಿದರು. ಉಸ್ತಾದ್ ಅಬ್ದುಲ್ ಖಾದರ್ ಮುಸ್ಲಿಯಾರ್ ಶುಭ ಹಾರೈಸಿದರು.ಪ್ರದಾನ ಕಾರ್ಯದರ್ಶಿ ಇಸ್ಮಾಯಿಲ್, ಉಪಾಧ್ಯಕ್ಷ ಹುಸೈನ್ ,ಕೋಶಾಧಿಕಾರಿ ಇಕ್ಬಾಲ್ ಸಹಿತ ಆಡಳಿತ ಸಮಿತಿಯ ಸದಸ್ಯರುಗಳು, ಜಮಾಅತ್ ನಿವಾಸಿಗಳು ಭಾಗವಹಿಸಿದ್ದರು.
ಮದರಸ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳನ್ನು ಹಾಡಿದರು. ದ್ವಜ ವಂದನೆಯ ಬಳಿಕ ರಾಷ್ಟ್ರ ಗೀತೆ ಹಾಡಲಾಯಿತು.ಅಮೀರ್ ಮದನಿ,ಹುಸೈನಾಕ ಸಹಿತ ಹಲವರು ಸಿಹಿ ತಿಂಡಿಗಳನ್ನು ಹಂಚಿದರು.ಸಲಾತ್ ಮೂಲಕ ಸಭೆಯು ಮುಕ್ತಾಯವಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.