(ವಿಶ್ವ ಕನ್ನಡಿಗ ನ್ಯೂಸ್) : ದೇಶವಿಡೀ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಿದ ಹರ್ಷದಲ್ಲಿದೆ. ಇಡೀ ದೇಶದ ನಾಗರಿಕರು, ಸಂಘಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ದಿನವನ್ನು ಒಂದು ಐತಿಹಾಸಿಕ ದಿನವಾಗಿಸಿದ್ದಾರೆ. ಹಾಗೇಯೇ ಹಿಂದೂ ಯುವ ಸೇನೆ ವೃಕ್ಷರಾಜ ಶಾಖೆ ಹಾಗೂ ವೃಕ್ಷರಾಜ ಗ್ರಾಮೀಣಾಭಿವೃದ್ಧಿ ಕೇಂದ್ರ ರಿ. ಇದರ ವತಿಯಿಂದ ವಿಷೇಶ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.
ತಮ್ಮ ದುಡಿಮೆಯ ಒಂದಂಶವನ್ನು ಇಂದಿನ ಈ ಕಾರ್ಯಕ್ರಮಕ್ಕೆ ತೆಗೆದಿಡುವ ಮೂಲಕ ಅದರಿಂದ ಸಂಗ್ರಹವಾದ ಮೊತ್ತದಲ್ಲಿ ಮಂಗಳೂರಿನಲ್ಲಿರುವ ಸಂವೇದನಾ ಮಕ್ಕಳ ಮನೆ ಎಂಬ ಆಶ್ರಮದ ಮಕ್ಕಳಿಗೆ ಅಗತ್ಯವಿರುವ ಸುಮಾರು 20,000₹ ಮೌಲ್ಯದ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ನೀಡಿ ಮಕ್ಕಳಿಗೆ ಸಿಹಿ ಹಂಚಿ ಇಂದಿನ ಇಡೀ ದಿನವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಅದ್ಯಕ್ಷರಾದ ಶ್ರೀ ಯಶೋಧರ ಚೌಟ, ಹಿಂದೂ ಯುವಸೇನೆ ವೃಕ್ಷರಾಜ ಶಾಖೆಯ ಅದ್ಯಕ್ಷರಾದ ಮನೋಜ್ ಪೂಜಾರಿ, ಸಂಚಾಲಕರಾದ ಕಿಶೋರ್ ಕುಮಾರ್, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.