ಮುಲ್ಕಿ (www.vknews.in) : ಎಸ್ಕೆ ಎಸ್ಸೆಸ್ಸೆಫ್ ಕೊಲ್ನಾಡು ಶಾಖೆಯ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೊತ್ಸವವನ್ನು ಮುಲ್ಕಿ ಕ್ಲಸ್ಟರ್ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆ ಅಧ್ಯಕ್ಷ ಯಾಸಿರ್ ಮಾಸ್ಟರ್ ಮುಲ್ಕಿ ವಹಿಸಿದ್ದರು. ಕೊಲ್ನಾಡು ಶಾಫಿ ಜುಮಾ ಮಸೀದಿಯ ಖತೀಬ್ ಶರೀಫ್ ದಾರಿಮಿ ಅಲ್ ಹೈತಮಿ ದುವಾ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಕೋಶಾಧಿಕಾರಿ ಇರ್ಷಾದ್ ಕೆರೆಕಾಡು ಪ್ರಾಸ್ತಾವಿಕ ಭಾಷಣೈದರು.
ಕೊಲ್ನಾಡು ಶಾಫಿ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹನೀಫ್, ಮುಲ್ಕಿ ಕ್ಲಸ್ಟರ್ ಅಧ್ಯಕ್ಷ ಎಂ.ಇಸ್ಮಾಯಿಲ್ ಉಪಸ್ಥಿತರಿದ್ದರು. ಕೊಲ್ನಾಡು ಶಾಖೆ ಕಾರ್ಯದರ್ಶಿ ಮೊಯಿದೀನ್ ರಾಹಿಲ್ ಸ್ವಾಗತಿಸಿದರು. ಮುಲ್ಕಿ ಕ್ಲಸ್ಟರ್ ಕಾರ್ಯದರ್ಶಿ ಮುಹಮ್ಮದ್ ನೌಫಲ್ ಧನ್ಯವಾದ ಅರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.