ಮಂಗಳೂರು (www.vknews.in) : ಕೊಡಗಿನಲ್ಲಿ ಸನ್ಮಾನ್ಯ ಸಿದ್ದಾರಾಮಯ್ಯನವರ ಮೇಲೆ ಮೊಟ್ಟೆ ಎಸೆದ ಬಿಜೆಪಿಯ ನಡೆ ಖಂಡನೀಯ. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ರಾಜ್ಯದ ಜನತೆಯೇ ಮುಂದಿನ ದಿನಗಳಲ್ಲಿ ಕೊಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ವಹಾಬ್ ಕುದ್ರೋಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಿದ್ದಾರಾಮಯ್ಯ ಅಮೃತಮಹೋತ್ಸವದ ಜನಸಾಗರವು ಬಿಜೆಪಿಯ ನಿದ್ದೆಗೆಡಿಸಿದೆ. ಇದನ್ನು ಸಹಿಸದ ಬಿಜೆಪಿ ಮೊಟ್ಟೆ ಎಸೆಯುವ ಮೂಲಕ ಸಿದ್ದಾರಾಮಯ್ಯ ನವರ ಜನಪ್ರಿಯತೆಗೆ ಮಸಿ ಬಳೆಯಲು ಮಾಡಿದ ಕುತಂತ್ರ ಇದು. ಇದರ ವಿರುಧ್ದ ಕಾಂಗ್ರೆಸ್ ಪಕ್ಷ ಬೀದಿಗಿಳಿಯಲಿದೆ. ಇಂತಹ ಗೂಂಡಾರಾಜ್ ಯುಪಿಯಲ್ಲಿ ಕಂಡಿದ್ದೆವು. ಇವತ್ತು ಮುಖ್ಯಮಂತ್ರಿ ಬೊಮ್ಮಾಯಿ ಯೋಗಿ ಮಾದರಿ ಅಂತ ಹೇಳಿದ್ದಾರೆ.
ಅದೇ ರೀತಿ ಅವರ ಸರಕಾರ ಅದನ್ನು ಕಾರ್ಯಗತಗೊಳಿಸುತ್ತಿದೆ. ಇಂತಹ ಬೆದರಿಕೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಗ್ಗುವುದಿಲ್ಲ. ನಾವೆಲ್ಲರೂ ಸಿದ್ದಾರಾಮಯ್ಯನವರ ಬೆಂಬಲಕ್ಕೆ ನಿಂತಿದ್ದೇವೆ. ಇಂತಹ ಗೂಂಡಾಗಿರಿ ವಿರುಧ್ದ ಉಗ್ರ ಹೋರಾಟ ನಡೆಸಿಯೇ ತೀರುತ್ತೇವೆ.ಈ ಅಹಿತಕರ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ನೀಡಲಿ” ಎಂದು ವಹಾಬ್ ಕುದ್ರೋಳಿ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.