(www.vknews.in) : ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ಅಸ್ಸುಫ್ಫ ತರಗತಿ ಉದ್ಘಾಟನೆ ದುಬೈಯಲ್ಲಿ ನಡೆಯಿತು. ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಫ್ ಸೆಕ್ಟರ್ ಅಧ್ಯಕ್ಷರಾದ ಹಂಝ ಸಖಾಫಿ ಕೊಟ್ಟಮುಡಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಆಡಳಿತ ವಿಭಾಗ ಕಾರ್ಯದರ್ಶಿ ಹಬೀಬ್ ಸಜಿಪ ಸ್ವಾಗತಿಸಿದರು.
ಖ್ಯಾತ ಕರ್ಮ ಶಾಸ್ತ್ರ ವಿದ್ವಾಂಸರಾದ ಬಹು ಮುಹಮ್ಮದ್ ಮದನಿ ಚಪ್ಪಾರಪಡವು ಉಸ್ತಾದರು ಝೋನ್ ಮಟ್ಟದ ಅಸ್ಸುಫ್ಫ ತರಗತಿ ಉದ್ಘಾಟಿಸಿದರು. ನಂತರ ಫಾತಿಹಾದ ಸೂರದ ಮಹತ್ವದ ಬಗ್ಗೆ ವಿವರಣೆ ನೀಡಿದರು ಹಾಗೂ ತಜ್ವೀದ್ ಅನುಸಾರ ಕುರ್ಅನ್ ಓದಬೇಕು ಅದಕ್ಕಾಗಿ ಎಲ್ಲರೂ ಅಸ್ಸುಫ್ಫ ತರಗತಿ ಪಾಲ್ಗೊಂಡು ಉಪಯೋಗ ಪಡೆಯಬೇಕೆಂದು ಕರೆ ನೀಡಿದರು.
ರಾಷ್ಟ್ರೀಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು, ಝೋನ್ ಕ್ಯಾಬಿನೆಟ್ ನಾಯಕರಾದ ಇಬ್ರಾಹೀಂ ಮದನಿ, ನಿಯಾಝ್ ಬಸರ, ರಫೀಕ್ ಚಾಮಿಯಾಲ್, ಲತೀಫ್ ಪಾತೂರ್, ಮುಸ್ತಫ ಮಾಸ್ಟರ್, ಶುಕೂರ್ ಮಣಿಲ, ಬಷೀರ್ ಪಡುಬಿದ್ರಿ, ಅಲೀ ಅಬ್ಬೆಟ್ಟು ಮುಂತಾದ ನಾಯಕರು ಉಪಸ್ಥಿತರಿದ್ದರು. ರಿಯಾಝ್ ಕೊಂಡಂಗೇರಿ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.