(www.vknews.in) : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಗೋಳ್ತಮಜಲು ಹಾಗೂ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಿತು. ರಕ್ತದಾನ ಶಿಬಿರದ ಉದ್ಘಾಟನೆಯನ್ನು ರಹ್ಮಾನಿಯ ಜುಮ್ಮಾ ಮಸೀದಿ ಗೋಳ್ತಮಜಲು ಇದರ ಅಧ್ಯಕ್ಷರಾದ ಹಾಜಿ ಜಿ ಮೊಹಮ್ಮದ್ ಹನೀಪ್ ಗೋಳ್ತಮಜಲು ಇವರು ನೆರವೇರಿಸಿದರು.
ರಕ್ತ ದಾನದ ಪ್ರಾಮುಖ್ಯತೆಯ ಕುರಿತು ಹೆಲ್ತ್ ಕೇರ್ ಸೆಂಟರ್ ಕಲ್ಲಡ್ಕ ಇದರ ವೈದ್ಯರಾದ ಆಶಿಕ ಆಯಿಶಾ ಫರ್ಹಾನಾ ಮತ್ತು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಲ್ಲಡ್ಕ ಇದರ ಅಧ್ಯಕ್ಷರಾದ ಸಿದ್ದೀಕ್ ಕಲ್ಲಡ್ಕ ಮಾತಾನಾಡಿದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪೋರಂ ಗೋಳ್ತಮಜಲು ಇದರ ಅಧ್ಯಕ್ಷರಾದ ಸವೂದ್ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರಾದ ಹಾರಿಸ್ ಅಮರ್, ವಡಗರ ಪ್ರೆಂಡ್ಸ್ ಇದರ ಅಧ್ಯಕ್ಷರಾದ ಆಸಿಪ್ ಸೀಕೋ ಮತ್ತು ಕೆ ಎಂ ಸಿ ರಕ್ತ ನಿಧಿ ಇದರ ಮೇಲುಸ್ತುವಾರಿ ಆದ ಡಾಕ್ಟರ್ ಲಕ್ಷ್ಮಣ್ ಇವರುಗಳು ಉಪಸ್ಥಿತರಿದ್ದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪೋರಂ ಕಲ್ಲಡ್ಕ ಇದರ ಸಂಯೋಜಕರಾದ ಹಮೀದ್ ಅಲಿ ಸ್ವಾಗತಿಸಿ ಮನ್ಸೂರ್ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಶಿಬಿರದಲ್ಲಿ 84 ರಕ್ತದಾನಿಗಳು ರಕ್ತದಾನ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.