(ವಿಶ್ವ ಕನ್ನಡಿಗ ನ್ಯೂಸ್) : ದೇಶವು 75 ನೇ ಸ್ವಾತಂತ್ರ್ಯ ಅಮ್ರತಮಹೋತ್ಸವದ ಹೊಸ್ತಿಲಲ್ಲಿ 76ನೇ ಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಹಳ್ಳಿ ಗಲ್ಲಿಗಳಲ್ಲೂ ಪಟ್ಟಣ ಪೇಟೆಗಳಲ್ಲೂ, ಮಸ್ಜಿದ್ ಮಂದಿರಗಳಲ್ಲೂ, ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು, ಬಡವ ಶ್ರೀಮಂತನೂ, ಹೀಗೆ ಎಲ್ಲರೂ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸುವ ಮೂಲಕ ದೇಶಪ್ರೇಮದ ಸಾಮ್ರಾಟರಾದೆವು.
ಪಾವೂರು ಗ್ರಾಮದ ಮೂಲೆಗಳಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು. ಇದರ ಮಧ್ಯೆ SDPI ಪಕ್ಷದ ಇನೋಳಿಯ ಯುವಕರು ತಮ್ಮ ಹವ್ಯಾಸದಂತಿರುವ, ಸಮಾಜಸೇವೆಗೆ ಶಕ್ತಿತುಂಬುವ, ಮನೆಗೆ ಬ್ರಷ್ ಕಟ್ಟರ್ ಮೆಷಿನ್ ಕಮ್ಯುನಿಟಿ ಡೆವಲಪ್ಮೆಂಟ್ ಇನೋಳಿ ಇದರ ವತಿಯಿಂದ ನೀಡಿ, ಯುವಕರ ಸಮಾಜಸೇವೆಗಳಿಗೆ ಪ್ರೋತ್ಸಾಹವನ್ನು ನೀಡಿದರು.
ಇನೋಳಿಯ ಯುವಕರು ಸೇವೆಯ ಸೇವಕರನ್ನು ಮುಂದೆ ತರುವ, ಸಮಾಜಕ್ಕೆ ಪರಿಚಯಿಸುವ, ಅವರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಈ ಭಾರಿಯ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ವೇದಿಕೆ ಕಲ್ಪಿಸಿದರು. ಕಳೆದ ತಿಂಗಳು ಸಂಭವಿಸಿದ ಪ್ರಕ್ರತಿ ವಿಕೋಪದ ಸಮಯದಲ್ಲಿ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಮಾನವೀಯತೆಯ ತುರ್ತುಸೇವೆಗಳನ್ನು ಮಾಡಿದ್ದ ಯುವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಡೋಲ್ಪಿ ಡಿಸೋಝ, ಅಶ್ರಫ್ ಮುಟ್ಟಿ0ಜ, ಅಮ್ಮಿ ಕಲ್ಲಾಜೆ, ನವಾಝ್ ಪಾಂಚರ್ಪಾಲ್, ಮಜೀದ್ ಐ ಕೆ, ಅಝೀಝ್ ಪೋರ್ಸೋಟ, ನೌಶಾದ್ ಕಲ್ಲಕಂಡ, ಹೈದರ್ ಕಲ್ಲಾಜೆ, ಅರಾಫತ್ ಕಾಣ, ಹೈದರ್ ಸೈಟ್ ರವರು ಗೌರವ ಕಾಣಿಕೆ ಪಡೆದರು.
ಶಮೀರ್ ಟಿಪ್ಪುನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.