(www.vknews.in) : ಮನುಷ್ಯರ ತಪ್ಪುಗಳಿಂದಾಗಿ ಪ್ರಕೃತಿ ಸಮತೋಲನ ಕಳೆದು ಕೊಂಡಿದೆ, ಗೋವುಗಳಿಂದ ಮಾತ್ರ ಪ್ರಕೃತಿಯನ್ನು ಕಾಪಾಡಲು ಸಾಧ್ಯ ಎಂದು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ದ ಅಧ್ಯಕ್ಷರಾದ ಶ್ರೀ ಭಕ್ತಿ ಭೂಷಣ್ ದಾಸ ಇವರು ಫರಂಗಿಪೇಟೆ ಓಂ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಯಾ ವತಿಯಿಂದ ಜರಗುವ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ದರ್ಮದರ್ಶಿಗಳಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಯವರು ವಹಿಸಿದ್ದರು, ಖ್ಯಾತ ಮನೋವೈದ್ಯರಾದ ಡಾ ರವೀಶ್ ತುಂಗಾ , ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ರಾಘವೇಂದ್ರ ಕೆ ವಿ , ಉತ್ಸವ ಸಮಿತಿ ಅಧ್ಯಕ್ಷರಾದ ಧನರಾಜ್ ಶೆಟ್ಟಿ ತೇವು , ಫರಂಗಿಪೇಟೆ ಓಂ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಚಂದ್ರಶೇಖರ ಗಾಂಭೀರ , ಉಪಸ್ಥಿತರಿದ್ದರು.
ಕಲಿಕೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು ಉತ್ಸವ ಸಮಿತಿ ಕಾರ್ಯದರ್ಶಿ ಪ್ರಮೋದ್ ಕರ್ಕೇರ ಸ್ವಾಗತಿಸಿದರು , ದಿನಕರ ಕರ್ಕೇರ ಮಂಟಮೆ ಪ್ರಸ್ತಾಪಿಸಿದರು , ಕರುಣಾಕರ ಕೊಟ್ಟಾರಿ ವಂದಿಸಿದರು , ಜಗದೀಶ ಕಡೆಗೋಳಿ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.