(www.vknews.in) ಅಜ್ಜಿನಡ್ಕ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮೂಹ ಸಂಪನ್ಮೂಲ ಕೇಂದ್ರ ಪಿಲಾರ್,,ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಅಜ್ಜಿನಡ್ಕ ಜಂಟಿ ಆಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಇತ್ತೀಚೆಗೆ ನಡೆಯಿತು.
ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದ ECO ಅನ್ನಪೂರ್ಣ ರವರು” ಮಕ್ಕಳ ಪ್ರತಿಭೆಗಳನ್ನು ಹೊರತಂದು ಪ್ರೋತ್ಸಾಹಿಸುವ ಈ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾಗಿದೆ.ಇದು ಇನ್ನಷ್ಟು ಅದ್ದೂರಿಯಾಗಿ ನಡೆಯಬೇಕು ಎಂದು ಹಾರೈಸಿದರು.
ಕಾರ್ಯಕ್ರಮದ ಲ್ಲಿ ಕೋಟೆಕಾರು ಪಟ್ಟಣ ಪಂಚಾಯಿತ್ ನ ಸದಸ್ಯರಾದ ಅಹಮ್ಮದ್ ಅಜ್ಜಿನಡ್ಕ, ಇಸಾಕ್ ಕೋಟೆಕಾರ್, ಗಲ್ಫ್ ಫ್ರೆಂಡ್ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ಇಸ್ಮಾಯಿಲ್ ಸಿ.ಎಚ್, ಬದ್ರಿಯಾ ವೆಲ್ ಫೇರ್ ಸೊಸ್ಯೆಟಿಯ ಅಧ್ಯಕ್ಷರಾದ ಎಸ್.ಬಿ ಹನೀಫ್,
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರಿಮತಿ ಸುಶ್ಮಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೀತಾ, ಹರೀಶ್ ಮೊಹನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಇಬ್ರಾಹಿಮ್ ವಹಿಸಿದ್ದರು.
ಪ್ರಥಮವಾಗಿ ಮುಖ್ಯೋಪಾಧ್ಯಾಯಿನಿ ಶ್ರಿಮತಿ ರಝಿಯ ಸ್ವಾಗತಿಸಿದರು,ಕೊನೇಯಲ್ಲಿ ಸಹ ಅಧ್ಯಾಪಿಕೆ ಶ್ರಿಮತಿ ಮಾಲಿನಿ ವಂದಿಸಿದರು. ಕಾರ್ಯಕ್ರಮವನ್ನು ಸುಗುಣ ಮೇಡಂ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.