ಮಲಪ್ಪುರಂ (www.vknews.in) : ಕೇರಳ: ಕೇರಳ ಸರಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಜೆ೦ಡರ್ ನ್ಯೂಟ್ರಾಲಿಟಿ ಮೂಲಕ ಲಿಂಗ ತಾರತಮ್ಯವನ್ನು ಸರಿದೂಗಿಸಲು ಹೊರಟಿರುವ ಪ್ರಕ್ರಿಯೆಯು ಧಾರ್ಮಿಕ ಮೌಲ್ಯಗಳನ್ನು ಒಡೆಯುತ್ತದೆ ಎ೦ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ಹೇಳಿದ್ದಾರೆ.
ಕೇರಳ ಸರಕಾರವು ಮಕ್ಕಳೆಡೆಯಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರ, ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಗಂಡು-ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಒಟ್ಟಿಗೆ ಕುಳ್ಳಿರಿಸುವಂತಹ ಹೊಸ ಶಿಕ್ಷಣ ಕರಡು ಮಸೂದೆಯನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ ಇಲ್ಲಿನ ಪ್ರಮುಖ ಧಾರ್ಮಿಕ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಹಾಗೂ ಪ್ರಮುಖ ರಾಜಕೀಯ ಪಕ್ಷವಾದ ಮುಸ್ಲಿಂ ಲೀಗ್ ನ ತೀವ್ರ ಪ್ರತಿರೋಧಗಳಿಂದಾಗಿ ಈ ಮಸೂದೆಯನ್ನು ಹಿಂಪಡೆಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.