ಧರ್ಮ ಧರ್ಮಗಳ ಸಂಘರ್ಷ ದ್ವೇಷ ತುಂಬಿದ ಒಲೆಗೆ ತುಪ್ಪವ ಸುರಿದರು ಕಿಡಿಯ ಹಚ್ಚಿದರು ನಿನ್ನ ತಲೆಗೆ ನಿರುದ್ಯೋಗ ದುಶ್ಚಟಗಳು ಸಿಲುಕಿಸಿತು ಅವರ ಬಲೆಗೆ ಕಾರ್ಯಕರ್ತನಿಗೆ ಬೇಕಾದ ಅರ್ಹತೆಗಳು ಈಗ ಇದೆ ನಿನ್ನ ಒಳಗೆ
ಅರಿಯಲಿಲ್ಲ ಗೆಳೆಯ ಆಗಲಿರುವೆ ನೀರೋರ್ವ ಹರಕಲು ಪೊರಕೆ
ಪಕ್ಷದ ಹೆಸರಲ್ಲಿ ರಾತ್ರಿ ಹಗಲೆನ್ನದೆ ಅಲೆದೆ ಬ್ಯಾನರ ಕಟ್ಟಿ ಬೀದಿ ಬದಿ ಅಲ್ಲಲ್ಲಿ ಜಗಳ ಕಾದೆ ಮನೆ ಮನೆಗೆ ತೆರಳಿ ಚಿಹ್ನೆಯ ಹಿಡಿದು ಕುಣಿದೆ ನಿದ್ದೆಗೆಟ್ಟು ಪಕ್ಷ ಗೆಲ್ಲಿಸಲು ಅನ್ಯರನ್ನು ಜರೆದೆ
ಅರಿಯಲಿಲ್ಲ ಮಾರಾಯ ನೀನಾಗಲಿರುವೆ ಹರಕಲು ಪೊರಕೆ
ನೇತಾರನ ಗಮನವನ್ನು ಕೊನೆಗೂ ನೀ ಸೆಳೆದೆ ನಿರಾಯಾಸ ಜೈಲಿಂದ ಹೊರಬರುವಷ್ಟು ಬೆಳೆದೆ ಕೊಲೆ ಕೊಳ್ಳೆ ಅಕ್ರಮ ಅಪರಾದವ ಮೈಮೇಲೆ ಎಳೆದೆ ನೀನರಿಯದೆ ಪಕ್ಷದೊಳಗೆ ಕೆಳಹಂತದ ನೇತಾರ ನೀನಾದೆ
ಆಗಲೂ ಅರಿಯಲಿಲ್ಲಾ ಮಿತ್ರ ನೀನಾಗಲಿರುವೆ ಹರಕಲು ಪೊರಕೆ
ಕುಡಿಸಿ ತಿನ್ನಿಸಿದರು ಆಗಾಗ ಕಾಂಚಾಣವ ಎಸೆದರು ಜಾತಿ ವೈಷಮ್ಯದ ಸೂಜಿಯನ್ನೂ ಅದರೊಂದಿಗೆ ಚುಚ್ಚಿದರು ಬಿಡುವಿಲ್ಲದ ಕಾರ್ಯಕರ್ತನನ್ನಾಗಿ ನಿನ್ನನ್ನು ಮಾಡಿದರು ದೊಡ್ಡ ದೊಡ್ಡ ನೇತಾರರು ನಿನ್ನ ಕರೆಗೂ ಓ ಗೊಟ್ಟರು
ನೀನರಿಯಲಿಲ್ಲ ಈಗಲೂ ನೀನಾಗಲಿರುವೆ ಹರಕಲು ಪೊರಕೆ
ಚುನಾವಣೆ ಎದುರಿಸಲು ರಕ್ತ ಸಾಕ್ಷಿಯು ಬೇಕಿತ್ತು ವಿನಾ ಕಾರಣದ ನೆಪ ಮಾತ್ರ ಮನಸ್ತಾಪ ಬೆಳಿದಿತ್ತು ನಿನ್ನ ಸ್ಥಾನವ ಬೇರೆಯನಿಗೆ ಈಗಾಗಲೇ ನೀಡಲಾಗಿತ್ತು ನಿನಗರಿವಿಲ್ಲದೇ ನಿನ್ನನ್ನು ಆಗಲೇ ಒಂಟಿ ಮಾಡಲಾಗಿತ್ತು
ಈಗ ನೀನರಿಯತೊಡಗಿದೆ ನೀನಾಗುತಿರುವೆ ಹರಕಲು ಪೊರಕೆ
ಉಪಯೋಗ ಶೂನ್ಯ ಕುದುರೆ ಬದುಕುಳಿದೂ ಏನು ಫಲ ಸಂತಾಪದ ನೆಪದಲಿ ನೇತರು ಧಾವಿಸಿದರು ಕೆಲವು ಸಲ ಮುಷ್ಕರವ ಆಕ್ರಮದೊಂದಿಗೆ ಮಾಡಿದರು ಊರಿಡೀ ಗದ್ದಲ ಕೆಟ್ಟ ರಾಜಕೀಯದ ನೈಜ ರೂಪ ಅರಿಯುವಾಗ ಮಿಂಚಿತ್ತು ಕಾಲ
ನೀನರಿತೆ ಕೊನೆಗೂ ನೀನಾದೆ ನಿಜವಾದ ಹರಕಲು ಪೊರಕೆ
ಜಾತಿ ಹೆಸರಲ್ಲಿ ಕೋಮುವೈಷಮ್ಯವ ಹರಡಿ ಮನೆಯವರ ಊರವರ ನೆಮ್ಮದಿಯ ಹಾಳು ಮಾಡಿ ಸುಂದರ ಬಾಳಿಗೆ ಅರ್ಧಕ್ಕೇ ನಾಂದಿ ಹಾಡಿ ಮಣ್ಣಾಗುವೆ ನೊಂದ ಕರಳ ಹಿಡಿಶಾಪದೊಡಗೂಡಿ
ನೀನಾದೆ ಪೊರಕೆ ಮಾರಾಯ ಬರೀ ಹರಕಲು ಪೊರ್ಕೆ
– ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.