ಮನಾಮ (www.vknews.in) : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ಕರ್ನಾಟಕ ಘಟಕ ಆಯೋಜಿಸಿದ “ಫ್ರೀಡಂ ಫೆಸ್ಟ್” ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಲ್ಮಾಬಾದ್ ಅಲ್ ಹಿಲಾಲ್ ಆಸ್ಪತ್ರೆ ಸಭಾಭವನದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಸಂಜೆ ೫ ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಛದ್ಮವೇಷ ,ಹಾಡು , ದಂಪತಿಗಳಿಗೆ ರಸಪ್ರಶ್ನೆ, ಬಲೂನ್ ಗೇಮ್ ಮತ್ತು ಇನ್ನಿತರ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು .
ಈ ಕಾರ್ಯಕ್ರಮದಲ್ಲಿ ಇಂಡಿಯನ್ ಸೋಷಿಯಲ್ ಫೋರಮ್ ಕಳೆದ ಎರಡು ವರ್ಷಗಳಲ್ಲಿ ಮತ್ತು ವಿಶೇಷವಾಗಿ ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ನಡೆಸಿದ ಕಾರ್ಯ ಚಟುವಟಿಕೆಗಳನ್ನು ಕಿರು ದೃಶ್ಯವಾಳಿ ಮೂಲಕ ಇಂಡಿಯನ್ ಸೋಷಿಯಲ್ ಫೋರಮ್ ಕೇಂದ್ರ ಸಮಿತಿ ಜೊತೆ ಕಾರ್ಯದರ್ಶಿಯಾಗಿರುವಂತಹ ಅಬೂಬಕ್ಕರ್ ಸಿದ್ದಿಕ್ ವಿವರಿಸಿದರು.
ಸಂಜೆ 8 ಗಂಟೆಗೆ ನಡೆದ ಸಭಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಸೋಷಿಯಲ್ ಫೋರಮ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವಂತಹ ರಫೀಕ್ ಅಬ್ಬಾಸ್ ರವರು ಬಹರೈನಿನಲ್ಲಿ ಜಾತಿ ಮತ ಬೇಧ ಇಲ್ಲದೆ ಇಂಡಿಯನ್ ಸೋಷಿಯಲ್ ಫೋರಮ್ ನಡೆಸುತ್ತಿರುವಂತಹ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗ ಬೇಕೆಂದು ಕರೆ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಇಂಡಿಯನ್ ಸೋಷಿಯಲ್ ಫೋರಮ್ ಕರ್ನಾಟಕ ರಾಜ್ಯಾಧ್ಯಕ್ಷ ಇರ್ಫಾನ್ ಅಬ್ದುಲ್ ರಹಿಮಾನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕನ್ನಡ ಸಂಘ ಬಹರೈನ್ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ಕಾರ್ಯಕ್ರಮವನ್ನುದ್ದೇಶಿಸಿ ಸ್ವಾತಂತ್ರ್ಯದ ಶುಭಾಶಯ ಕೋರಿ, ಯಾವುದೇ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ಚಟುವಟಿಕೆಯಲ್ಲಿ ಕನ್ನಡ ಸಂಘದ ಬೆಂಬಲ ಸೂಚಿಸಿದರು ಮತ್ತು ಇಂಡಿಯನ್ ಸೋಷಿಯಲ್ ಫೋರಮ್ ಕಾರ್ಯಗಳ ಶ್ಲಾಘಿಸಿ ಪ್ರಶಂಶೆ ವ್ಯಕ್ತ ಪಡಿಸಿದರು. ಸಾಮಾಜಿಕ ಕಾರ್ಯಕರ್ತರಾದ ಶ್ರೀ ಅಮರನಾಥ ರೈ ಯವರು ,ಶ್ರೀ ಮೊಹಮ್ಮದ್ ಹಫೀಜ್ ಉಳ್ಳಾಲ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇಂಡಿಯನ್ ಸೋಷಿಯಲ್ ಫೋರಮ್ ಕರ್ನಾಟಕ ಘಟಕ ಕಾರ್ಯದರ್ಶಿ ಮೊಹಮ್ಮದ್ ನಝೀಮ್ ಸ್ವಾಗತಿಸಿ ಸಮಿತಿ ಸದಸ್ಯರಾದಂತಹ ಮೊಹಮ್ಮದ್ ಸಿರಾಜ್ ಕಣ್ಣಂಗಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು . ರಾಜ್ಯ ಸಮಿತಿ ಸದಸ್ಯರಾದ ಮೊಹಮ್ಮದ್ ಆಸೀಫ್ ವಂದಿಸಿದರು. ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಯಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.