(www.vknews.in) ವಿಶ್ವ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವ ಸಲ್ಲಮ್ ರವರ 1497 ನೇ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಬೃಹತ್ ಮೀಲಾದ್ ಸಮಾವೇಶವು ಅಕ್ಟೋಬರ್ 23 ಅಧಿತ್ಯವಾರದಂದು. ನಡೆಯಲಿದೆ. ಪ್ರಖ್ಯಾತ ಬುರ್ಧ ತಂಡದಿಂದ ನಹಥೆ ಶರೀಫ್, ಬುರ್ಧ ಮಜ್ಲಿಸ್, ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿಗಲಿಂದ ಹುಬ್ಬುರಸೂಲ್ ಪ್ರಭಾಶನ ಹಾಗೂ ಸಾದತುಗಳ ನೆತ್ರತ್ವದಲ್ಲಿ ನಡೆಯುವ ಬೃಹತ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿ ರಚಿಸಲು ಹಾಗೂ ಪೂರ್ವಭಾವಿ ರೂಪುರೇಷೆಗಳನ್ನು ಸಿದ್ಧಪಡಿಸಲು ಸಭೆಯು ದಿನಾಂಕ 28/08/2022 ಭಾನುವಾರ ಜೋರ್ಡಾನ್ ಕ್ಲಬ್ ಆಡಿಟೋರಿಯಂ ಊದ್ ಮೇತಾ ದಲ್ಲಿ ನಡೆಯಿತು.
ಮೌಲೀದ್ ಮಜ್ಲೀಸ್ ನೊಂದಿಗೆ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಝೋನ್ ಅದ್ಯಕ್ಷರಾದ ಬಹು\\ ಇಲ್ಯಾಸ್ ಮದನಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು, ಉವೈಸ್ ಸಖಾಫಿರವರು ಉದ್ಘಾಟಿಸಿದರು. ನ್ಯಾಷನಲ್ UAE ಇಹ್ಸಾನ್ ಕಾರ್ಯದರ್ಶಿ ಬಹುಮಾನ್ಯರಾದ ಅಬ್ದುಲ್ ಅಝೀಝ್ ಅಹ್ಸನಿ ದವರು ದುಆ: ಗೈದರು. ನಂತರ ಬ್ರಹತ್ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ರಚಿಸಲಾಯಿತು.
ಗ್ರಾಂಡ್ ಮೀಲಾದ್ ಅಡ್ವಯಿಸರ್ ಗಳಾಗಿ ಜನಾಬ್ ಸ್ಟಾರ್ ಲಿಂಕ್ ಹಮೀದ್ ಹಾಜಿ ,ಇಲ್ಯಾಸ್ ಮದನಿ ಬಾರ್ಷ , ಅಬ್ದುಲ್ ಅಝೀಝ್ ಅಹ್ಸನಿ ,ಶಾಹುಲ್ ಹಮೀದ್ ಸಖಾಫಿ ,
ಚೇರ್ ಮ್ಯಾನ್ ಇಕ್ಬಲ್ ಸಿದ್ದಕಟ್ಟೆ ,
ವರ್ಕಿಂಗ್ ಚೇರ್ ಮ್ಯಾನ್ ರಝಕ್ ಹಾಜಿ ನಾಟಕಲ್ ,
ಕನ್ವಿನರಾಗಿ ನಾಸಿರ್ ಪರಪ್ಪು ,
ಉಪ ಕನ್ವೀನರ್ ಆಸಿಫ್ ಇಂದ್ರಜಾ ,
ಫೈನಾನ್ಸಿಯಲ್ ಕಂಟ್ರೋಲರ್ ಜನಾಬ್ ನಝೀರ್ ಹಾಜಿ ಕೆಮ್ಮಾರ
ಹಣಕಾಸು ಕಾರ್ಯದರ್ಶಿಯಾಗಿ ಜಮಾಲ್ PR ಮತ್ತು ಅಬ್ದುಲ್ ರಹ್ಮಾನ್ ಸುಳ್ಯ ಸೇರಿದಂತೆ ಹಲವು ವಿವಿಧ ವಿಭಾಗಗಳಗೊಂಡ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಉವೈಸ್ ಸಖಾಫಿ ಉಸ್ತಾದರು ಪ್ರವಾದಿ ಪ್ರೇಮ ಹಾಗೂ ಮಾನವ ಕಲ್ಯಾಣಕ್ಕೆ ಪ್ರವಾದಿಯವ (ಸ ಅ) ರ ಉಪದೇಶ ಹಾಗೂ ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು
ನಂತರ ನೂತನ ಸ್ವಾಗತ ಸಮಿತಿ ಚೇರ್ಮನ್ ಇಕ್ಬಾಲ್ ಸಿದ್ದಕಟ್ಟೆ ರವರು ಪ್ರಸ್ಥಾವೀಕ ಬಾಷಣ ನಡೆಸಿದರೆ, ಅಬ್ದುಲ್ ಅಝೀಝ್ ಅಹ್ಸನಿ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದರು ಸಭೆಯಲ್ಲಿ ಭಾಗವಹಿಸಿದ ಜಮಾಲ್ PR , ಅಬೂಬಕ್ಕರ್ ಮದನಿ ಅಜ್ಮಾನ್ , ಅಬ್ದುಲ್ ರಝಕ್ ಹಾಜಿ ,ಶುಭ ಅರೈಸಿ ಮಾತನಾಡಿದರು ಸಭೆಯಲ್ಲಿ ಇಸ್ಮಾಯಿಲ್ ಕೆಮ್ಮಾರ ,ರಫೀಕ್ ಕಲ್ಲಡ್ಕ, ಸತ್ವ ಸೆಕ್ಟರ್ ಅದ್ಯಕ್ಷರಾದ ಅಥಾವುಲ್ಲಾ , ಜಬಲ್ ಅಲಿ ಅದ್ಯಕ್ಷರಾದ ಅರಿಷ್ ಅಲ್ ಕೌಜ್ ಕಾರ್ಯದರ್ಶಿ ಇಲ್ಯಾಸ್ ನಂದಾವರ , ಬರ ದುಬೈ ಕಾರ್ಯದರ್ಶಿ ಫಾರೂಕ್ ಕೈಯೂರ್ ಹಾಗು ಇನ್ನಿತರ ಸೆಕ್ಟರ್ ಯೂನಿಟ್ ಪದಾಧಿಕಾರಿಗಳು ಹಾಜರಿದ್ದರು.
ಹಾಜರಾದ ಎಲ್ಲಾ ಅತಿಥಿಗಳನ್ನುಝೋನ್ ಕಾರ್ಯದರ್ಶಿ ಮನ್ಸೂರ್ ಹರೇಕಳ ಸ್ವಾಗತ ಮಾಡಿದರೆ, ಕೊನೆಗೆ ರಶೀದ್ ಪಡೀಲ್ ಧನ್ಯವಾದ ಸಮರ್ಪಣೆ ನಡೆಸಿದರು. ಅಸೀಫ್ ಇಂದ್ರಾಜೆಯ ನೇತ್ತತ್ವದಲ್ಲಿ ಕೊನೆಯಲ್ಲಿ ಯಾ ಅಕ್ರಮ ಬೈತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.