ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ..
ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಸಾಮಾಜಿಕ ನಾಯಕ, ಶಿಕ್ಷಣ ತಜ್ಞ, ಪರೋಪಕಾರಿ ಲಂಡನ್ ಮುಹಮ್ಮದ್ ಹಾಜಿ ಅವರ ಸ್ಮರಣಾರ್ಥ ಶೇಖ್ ಜಾಯೆದ್ ಫೌಂಡೇಶನ್ ಸ್ಥಾಪಿಸಿರುವ ಪ್ರಥಮ ರಾಷ್ಟ್ರ ಸೇವಾ ಪ್ರಶಸ್ತಿಯನ್ನು ಖ್ಯಾತ ಸಮಾಜಸೇವಕ ಡಾ.ಫಿರೋಝ್ ಕುಂಞಂಪರಂಪಿಲ್ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ತಿಳಿದುಬಂದಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿದೆ.
ಪರೋಪಕಾರಿ ಕ್ಷೇತ್ರದಲ್ಲಿ ನೂರಾರು ರೋಗಿಗಳಿಗೆ ಪರಿಹಾರ ನೀಡಿದ ಫಿರೋಜ್ ಅವರ ಕಾರ್ಯ ಅಪ್ರತಿಮ. ಅಕ್ಟೋಬರ್ 21 ರಂದು ಮಂಜೇಶ್ವರದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ ಎಂದು ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಮಾಹಿತಿ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.