ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್):ಗೌರಿ ಗಣೇಶ ಹಬ್ಬದ ದಿನದಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ವಿನಯ್ ಎನ್ ಶಾಮ್ ಅವರು ಮಧುಮೇಹದಿಂದ ಬಳಲುತ್ತಿದ್ದ ಮಹಿಳೆಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ .
ವಿಶಿಷ್ಟ ಹಾಗೂ ವಿಭಿನ್ನ ಸೇವೆಗಳ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಜನಪ್ರಿಯ ಯುವ ನಾಯಕ ಕೊಡಗೈದಾನಿ ಹಾಗೂ ಜಿ.ಹೆಚ್.ಫೌಂಡೇಶನ್ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಆಗಿರುವ ವಿನಯ್ ಎನ್ ಶ್ಯಾಮ್ ಅವರು ಗಣೇಶ ಹಬ್ಬದ ಆಡಂಬರದ ಆಚರಣೆಯ ಬದಲು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯಲುವಹಳ್ಳಿ ಗ್ರಾಮದ ಬಡ ಮಹಿಳೆಯೊಬ್ಬರಿಗೆ ಮಧುಮೇಹದಿಂದ ಎರಡೂ ಕಾಲುನ್ನು ಕಳೆದುಕೊಂಡ ಮಹಿಳೆಗೆ ಇಂದಿನ ಆರ್ಥಿಕ ನೆರವನ್ನು ನೀಡಿ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಕೊಡಿಸಿ ಕೃತಕ ಕಾಲನ್ನು ಅಳವಡಿಸಿಕೊಳ್ಳಲು ಎಲ್ಲಾ ಖರ್ಚುವೆಚ್ಚಗಳನ್ನು ತಾವೇ ಭರಿಸುವುದಾಗಿ ತಿಳಿಸಿ ಮಾನವೀಯತೆ ಮೆರೆದಿದ್ದಾರೆ.
ಇದೇ ವೇಳೆಯಲ್ಲಿ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್ ಸಹ ಮಹಿಳೆಗೆ ಆರ್ಥಿಕ ನೆರವು ನೀಡಿದರು .
ಈ ಸಂದರ್ಭದಲ್ಲಿ ದೇವಿಶೆಟ್ಟಿಹಳ್ಳಿ ಗಂಗಾಧರ್, ಅಂಗಟ್ಟ ಚಂದ್ರಣ್ಣ,ಬೀಡಗಾನಹಳ್ಳಿ ರಾಮಸ್ವಾಮಿ, ಮಧು, ನಗರಸಭಾ ಸದಸ್ಯರಾದ ಅಂಬರೀಶ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.