ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಅಮ್ಮುoಜೆ ಗ್ರಾಮದ ಕಲಾಯಿ ತಾಳಿಪ್ಪಾಡಿ ಎಂಬಲ್ಲಿ ನಿನ್ನೆ ಸಂಜೆ ಬಾಲಕನಿಗೆ ವಿಷಕಾರಿ ನೊಣವೊಂದು ಚುಚ್ಚಿದ್ದು, ಬಾಲಕ ರಾತ್ರಿ ಮೃತಪಟ್ಟಿದ್ದಾರೆ. ಹಕೀಮ್ ಎಂಬವರ ಮಗ ಮಾಝಿನ್(9) ಮೃತಪಟ್ಟ ಬಾಲಕನಾಗಿದ್ದಾನೆ. ಈತ ಸೆಂಟ್ ಅಂತೋನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.
ಪಿಲಿಗುಂಡೋಲು ಎಂಬ ಪ್ರಭೇದಕ್ಕೆ ಸೇರಿದ ವಿಷಕಾರಿ ನೊಣ ಕಚ್ಚಿದ ತಕ್ಷಣ ಕಲಾಯಿಯ ಸ್ಥಳೀಯ ವೈದ್ಯರಲ್ಲಿ ತೋರಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಈ ಸಮಯದಲ್ಲಿ ವೈದ್ಯರು ಯಾವುದೇ ಅಪಾಯಕಾರಿ ಬಗ್ಗೆ ಹೇಳದೆ ಇರವುದು ಮಗು ಸಾವಿಗೆ ಕಾರಣ ಎಂದು ಊರವರು ಆರೋಪಿಸುತ್ತಿದ್ದಾರೆ. ರಾತ್ರಿ ಗಾಯ ಉಲ್ಬಣವಾದಾಗ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾದರೂ, ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.