▪️ 08-09-2022 ಗುರುವಾರ ಮೃತದೇಹ ಕಡಬಕ್ಕೆ ಆಗಮಿಸಲಿದೆ : ISF ಮಾಹಿತಿ..
(www.vknews.in) : ಸೌದಿ ಅರೇಬಿಯಾದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಕಡಬದ ಹರೀಶ್ ಪೈ ಗೋಕುಲ್ ದಾಸ್ ಎಂಬವರು ದಿನಾಂಕ 27-08-2022 ರಂದು ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನರಾಗಿರುತ್ತಾರೆ.ಸೌದಿ ಅರೇಬಿಯಾದ ನಜ್ದ್ ವಿಲೇಜ್ ಎಂಬ ಕಂಪನಿಯಲ್ಲಿ ಮೆನೇಜರ್ ಕೆಲಸ ನಿರ್ವಹಿಸುತ್ತಿದ್ದ ಇವರ ಅಕಾಲಿಕ ಮರಣಕ್ಕೆ ISF ರಿಯಾದ್ ಘಟಕ ಸಂತಾಪ ವ್ಯಕ್ತಪಡಿಸಿದೆ.
ಇವರ ಮೃತದೇಹವನ್ನು ಊರಿಗೆ ತಂದು ಅಂತಿಮ ದರ್ಶನ ಮಾಡಬೇಕೆಂಬ ಕುಟುಂಬ ಸದಸ್ಯರು PFI ಕಡಬ ಡಿವಿಷನ್ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸೌದಿ ಅರೇಬಿಯಾ ಘಟಕದ ISF ಕಾರ್ಯಕರ್ತ ನೌಶಾದ್ ಕಡಬ ರವರ ಮೂಲಕ ಮನವಿಯನ್ನು ಸಲ್ಲಿಸಿದಾಗ ಕೂಡಲೇ ಕಾರ್ಯ ಪ್ರವೃತರಾದ ಇಂಡಿಯನ್ ಸೋಶಿಯಲ್ ಫಾರಂ(ISF) ಸದಸ್ಯರು ಅದಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ದಿನಾಂಕ 08-09-2022 ಗುರುವಾರ ದಂದು ಮೃತದೇಹ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ISF ಸದಸ್ಯರು ಮಾಹಿತಿ ನೀಡಿದ್ದಾರೆ. ಕಾನೂನು ಸಹಾಯ ತಂಡದಲ್ಲಿ ISF ಸೌದಿ ಅರೇಬಿಯಾ ಘಟಕದ ಸದಸ್ಯರಾದ ನೌಶಾದ್ ಕಡಬ,ಅಶ್ಫಾಕ್ ಉಚ್ಚಿಲ,ನಿಝಾಮ್ ಬಜ್ಪೆ,ಹಾಗೂ ಇಜಾಝ್ ಫರಂಗಿಪೇಟೆ ಸಹಕರಿಸುತ್ತಿದ್ದಾರೆ. ಈಗಾಗಲೇ ಭಾರತದ ಅನಿವಾಸಿ ಸಂಘಟನೆ ISF ಸದಸ್ಯರು ಜಾತಿ ಮತ ನೋಡದೆ ಈ ರೀತಿಯ ಹಲವಾರು ಮೃತದೇಹಗಳನ್ನು ಊರಿಗೆ ಕಳಿಸಿ ಮಾನವೀಯತೆ ಮರೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.