(www.vknews.in)ಮಡಿಕೇರಿ :ಕಳೆದ ಕೆಲ ದಿನಗಳ ಹಿಂದೆ ಇಹಲೋಕ ತ್ಯಜಿಸಿದ ಹಿರಿಯ ವಿದ್ವಾಂಸರೂ ಧಾರ್ಮಿಕ ಮುಖಂಡರು, ಸೂಪಿ ವರ್ಯರು ಹಾಗೂ ಸಮಸ್ತ ಎಂಬ ಆಧ್ಯಾತ್ಮಿಕ ಉಲಮಾ ಒಕ್ಕೂಟದ ಕೋಶಾಧಿಕಾರಿಯಾಗಿ ಮುಸ್ಲಿಂ ಸಮಾಜಕ್ಕೆ ನಾಯಕತ್ವ ನೀಡಿದ ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯಾರ್ (ನ, ಮ ) ರವರ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮವನ್ನು ಕೊಡಗು ಜಿಲ್ಲಾ ಎಸ್ ವೈ ಎಸ್ ಸಮಿತಿಯ ವತಿಯಿಂದ ಸಿದ್ದಾಪುರ ವರಕ್ಕಲ್ ಸ್ಮಾರಕ ಭವನದಲ್ಲಿ ಸೋಮವಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗಿನ ಉಲಮಾ ಉಮರಾ ನೇತಾರರು ಎಸ್ ವೈ ಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಗೌರವಾನ್ವಿತ ಚೇಲಕ್ಕಾಡ್ ಉಸ್ತಾದರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ತೀರಾ ನಷ್ಟ ಹಾಗೂ ಉಸ್ತಾದರಂತಹ ಅಪಾರ ಜ್ಞಾನವುಳ್ಳ ಉಲಮಾ ಶ್ರೇಷ್ಠರ ಮರಣ ಭೂಲೋಕದ ಅತಿ ದೊಡ್ಡ ನಷ್ಟಗಳಲ್ಲಿ ಒಂದಾಗಿದೆ ಮತ್ತು ಸಮಸ್ತ ಎಂಬ ಆಧ್ಯಾತ್ಮಿಕ ಉಲಮಾ ಒಕ್ಕೂಟಕ್ಕೆ ಉಸ್ತಾದರ ಕೊಡುಗೆಗಳು ಅಪಾರವಾಗಿದ್ದು 1950 ರಿಂದ ಸಮಸ್ತಕ್ಕಾಗಿ ಅಹೋರಾತ್ರಿ ದುಡಿದ ಚೇಲಕ್ಕಾಡ್ ಉಸ್ತಾದರು ಸಮಸ್ತದ ಲಕ್ಷಾಂತರ ಕಾರ್ಯಕರ್ತರಲ್ಲಿ ಸದಾ ನೆನಪಿಸಲ್ಪಡುವರು ಎಂದು ಕೊಡಗಿನ ಹಿರಿಯ ಧಾರ್ಮಿಕ ವಿದ್ವಾಂಸ ಕೊಡಗು ಸಹಾಯಕ ಖಾಝಿಗಳಾದ ಎಂ,ಎಂ ಅಬ್ದುಲ್ಲಾ ಫೈಝಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಅನುಸರಿಸಿದರು. ಉನ್ನತ ವಿದ್ವಾಂಸರಿಂದ ಮಾತ್ರವೇ ಧಾರ್ಮಿಕ ಜ್ಞಾನವನ್ನು ಸಮಾಜಕ್ಕೆ ನೀಡಲು ಸಾಧ್ಯ, ದೀರ್ಘ ತೊಂಬತ್ತು ವರ್ಷಗಳು ವಿಜ್ಞಾನ ಸಂಪಾದನೆಗಾಗಿ ಜೀವನವನ್ನು ಮೀಸಲಿಟ್ಟು ಅಪಾರ ಶಿಷ್ಯವೃಂದವನ್ನು ಸಂಪಾದಿಸಿ ನಮಗೆ ಒಳಿತಿನ ಹಾದಿಯನ್ನು ತೋರಿಸಿಕೊಟ್ಟು ನಮ್ಮಿಂದ ಅಗಲಿದ್ದಾರೆಂದು ಎಸ್ ವೈ ಎಸ್ ಜಿಲ್ಲಾ ಕೋಶಾಧಿಕಾರಿ ಉಮರ್ ಫೈಝಿ ಅನುಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಸಿಪಿಎಂ ಬಷೀರ್ ಹಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಸ್ಮಾನ್ ಫೈಝಿ ಸುಂಟಿಕೊಪ್ಪ, ಫೈಝಿ ಕುಶಾಲನಗರ ಇನ್ನಿತರ ಉಲಮಾ ಉಮರಾ ನಾಯಕರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. ಕೊನೆಯಲ್ಲಿ ಮೃತರ ಮೇಲೆ ಯಾಸಿನ್ ಪಾರಾಯಣೆ, ತಹ್ಲೀಲ್ ಸಮರ್ಪಣೆ ಮತ್ತು ಧುವಾ ಸಂಗಮವು ಎಂ,ಎಂ ಅಬ್ದುಲ್ಲಾ ಫೈಝಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.