(ವಿಶ್ವ ಕನ್ನಡಿಗ ನ್ಯೂಸ್) : ಒಂದು ತಿಂಗಳ ಮುಂಚೆ ಪತಿಯ ಆಕಸ್ಮಿಕ ಮರಣದಿಂದ “ಇದ್ದ” ಕುಳಿತಿರುವ ಒಂದು ತಾಯಿಯ ಎದುರಿಗೆ, ತನ್ನ ಇನ್ನುಳಿದ ಭರವಸೆ ಏಕೈಕ ಮಗನ ಶ್ವೇತವಸ್ತ್ರದಿಂದ ಮೂಡಿದ ಮಯ್ಯತ್ ಕೊಂಡುಹೋಗುವ ದೃಶ್ಯವನ್ನು ಯಾವ ರೀತಿ ವಿವರಿಸಲಿ..!
ಮುಂದಿನ ದಿನಗಳಲ್ಲಿ ಒಬ್ಬ ಉದಯೊನ್ಮುಖ ವಿದ್ವಾಂಸನಾಗಿ ಹೊರಹೊಮ್ಮಬೇಕಾದ ಮಗ ನಿಶ್ಚಲನಾಗಿ ತಾಯಿಯ ಮುಂದೆ ಮಲಗಿರುವ ದೃಶ್ಯ… ಹೆತ್ತು ಸಾಕಿದ ಆ ತಾಯಿಗೆ ಕ್ಷಮಿಸುವ ಶಕ್ತಿ ನೀಡು ಅಲ್ಲಾಹ್..
ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಲನಲ್ಲೂರ್ ಕಾಟ್ಟುಕುಳತ್ತ್ ಹಾಶಿಂ ಹಿಬತುಲ್ಲಾಹಿ ಎಂಬ ಕೊಂಡೊಟ್ಟಿ ಬುಖಾರಿಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯನ್ನೋ, ಒಂದು ತಿಂಗಳ ಮುಂಚೆ ಅಪಘಾತದಲ್ಲಿ ಅಸುನೀಗಿದ ತಂದೆಯ ಕುರಿತೋ ನನಗೆ ಯಾವುದೇ ಪರಿಚಯವಿಲ್ಲ. ಹಾಗಿದ್ದೂ ಕೂಡಾ ಮನಸ್ಸು ಚಂಚಲವಾಗುತ್ತಿದೆ. ಒಳಗಿನಿಂದ ನೋವಿನ ಕಟ್ಟೆಯೊಡಯುತ್ತಿದೆ.
ತಂದೆ ಮರಣಹೊಂದಿ ನಲ್ವತ್ತು ದಿವಸಗಳು ಕೂಡಾ ಆಗುವ ಮುಂಚೆ, ತಂದೆಯ ಆಗಲುವಿಕೆಯ ನೋವು ತಾಯಿಯ ಏಕಾಂಗಿಯಾದ ನೋವು, ಇವೆಲ್ಲವನ್ನು ಸಹಿಸಿ, ಅದೆಷ್ಟು ನೋವಿನೊಂದಿಗಿರಬಹುದು. ಆ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮೊಟಕುಗೊಳ್ಳದಿರಲಿ ಎಂದು ಕಾಲೇಜಿಗೆ ಹಿಂತಿರುಗಿ ಬಂದದ್ದು…!
ದೈನಂದಿನ ಪಠ್ಯ ಚಟುವಟಿಕೆಗಳೊಂದಿಗೆ ಹೇಳಬೇಕಾದ ಎಲ್ಲಾ ದಿಕ್ರ್ಗಳನ್ನೂ ಹೇಳಿ ಮಲಗಿರಬಹುದು..! ಬೆಳಗ್ಗೆ ಏಳದಿದ್ದಾಗ, ಸಹ ವಿದ್ಯಾರ್ಥಿಗಳಿಗೆ ಗೊತ್ತಾದದ್ದು…
ತಂದೆಯೊಂದಿಗೆ ಸ್ವರ್ಗದಲ್ಲಿ ಒಟ್ಟುಗೂಡಿಸು.ಅಲ್ಲಾಹ್🤲 ಇದನ್ನು ಓದುವವರು ಕನಿಷ್ಠ ಒಂದು ಪಾತಿಹವನ್ನಾದರೂ ಓದಬೇಕಾಗಿ ಸವಿನಯ ವಿನಂತಿ…
ಮಲೆಯಾಳಂ ನಿಂದ…
✍️ ಇಮ್ರಾನ್ ರೆಂಜಲಾಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.