(www.vknews.in)ಕಮ್ಯೂನಿಟಿ ಸೆಂಟರ್ ನ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಮೂಲಕ ನೀಟ್ ಬರೆದ 13 ವಿದ್ಯಾರ್ಥಿಗಳ ಪೈಕಿ 3 ಗ್ರಾಮೀಣ ಭಾಗದ ಯುವಕರು 559,557,535 ಅಂಕಗಳೊಂದಿಗೆ ಎಂ.ಬಿ.ಬಿ.ಎಸ್ ಗೆ ಅರ್ಹತೆ ಪಡೆದರೆ, ಒಬ್ಬಾಕೆ ವಿದ್ಯಾರ್ಥಿ 504 ಅಂಕಗಳೊಂದಿಗೆ ಎಂ.ಬಿ.ಬಿ.ಎಸ್ ಅರ್ಹತಾ ಸುತ್ತಿನಲ್ಲಿದ್ದಾರೆ. ಉಳಿದ ಎಂಟು ವಿದ್ಯಾರ್ಥಿಗಳು ಬಿ.ಡಿ.ಎಸ್ ಗೆ ಅರ್ಹತೆ ಪಡೆದಿದ್ದಾರೆ. ಸೆಂಟರಿನ ಕೌನ್ಸಿಲಿಂಗ್ ಪಡೆದು ಮೊನಿಟರಿಂಗ್ ನಲ್ಲಿರುವ ವಿದ್ಯಾರ್ಥಿಗಳ ಪೈಕಿ 597, 511, 510 ಅಂಕ ಪಡೆದು ಮೂರು ವಿದ್ಯಾರ್ಥಿನಿಯರು ಎಂ.ಬಿ.ಬಿ.ಎಸ್ ಸೀಟ್ ಗೆ ಅರ್ಹತೆ ಪಡೆಯಲಿದ್ದಾರೆ. ಈ ಮೂಲಕ ಕಮ್ಯೂನಿಟಿ ಸೆಂಟರ್ ಗ್ರಾಮೀಣ ಭಾಗದ ಮಕ್ಕಳ ಅಭಿವೃದ್ದಿ ಮತ್ತು ಸಾಧನೆಗೆ ಸಣ್ಣ ಪ್ರಮಾಣದ ಕೊಡುಗೆ ನೀಡಿದೆ.
ಈ ಪ್ರಯತ್ನಕ್ಕೆ ಸೆಂಟರ್ ಸಮುದಾಯದ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸುವ ಜೊತೆಗೆ ಈ ಯುವ ಪೀಳಿಗೆಯಲ್ಲಿ ಸಾಮಾಜಿಕ ಕಾಳಜಿ, ಮೌಲ್ಯ ಮತ್ತು ಬದುಕಿನ ಉದ್ದೇಶದೊಂದಿಗೆ ಜೀವಿಸುವ ಜೊತೆಗೆ, ಅವರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಮುಂದಿನ ತಲೆಮಾರಿಗೆ ನೇತೃತ್ವ ಕೊಡುವಂತೆ ಅವರನ್ನು ತರಬೇತು ಗೊಳಿಸಿದೆ.
ಸಮುದಾಯದ ಪ್ರಗತಿಪರ ಆಲೋಚನೆಗಳನ್ನು ಮತ್ತು ಸಂಪನ್ಮೂಲವನ್ನು ಕೇಂದ್ರೀಕೃತಗೊಳಿಸುವುದು ಆ ಮೂಲಕ ಭವಿಷ್ಯದ ತಲೆಮಾರಿಗೆ ಸರಿಯಾದ ಗುರಿ ನಿಶ್ಚಯಿಸಿ ಅವರನ್ನು ದೇಶಕ್ಕೆ ಕೊಡುಗೆ ಕೊಡುವ ಉತ್ತಮ ತಜ್ಞರನ್ನಾಗಿ ರೂಪಿಸುವುದು ಸೆಂಟರಿನ ಉದ್ದೇಶ. ಅದಕ್ಕಾಗಿ ಸೆಂಟರ್ 4600 ವಿದ್ಯಾರ್ಥಿಗಳನ್ನು ವಿಶೇಷ ಸರ್ವೆಯ ಮೂಲಕ ಗುರುತಿಸಿದೆ. ಈ ವಿದ್ಯಾರ್ಥಿಗಳನ್ನು ಕಾಲ್ ಸೆಂಟರ್, ಮುಖತಹ ಸಂದರ್ಶನ, ಕೌನ್ಸಿಲಿಂಗ್, ಮೌಲ್ಯಮಾಪನದ ಮೂಲಕ ಮೊನಿಟರಿಂಗ್ ಮಾಡುತ್ತಿದೆ.
ಅಧಿಕೃತವಾಗಿ ಸಂಸ್ಥೆಯಲ್ಲಿ 460 ವಿದ್ಯಾರ್ಥಿಗಳು ಸೆಂಟರಿನ ಉದ್ದೇಶಿತ ಗುರಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 460 ವಿದ್ಯಾರ್ಥಿಗಳು ಸೆಂಟರಿನ ಮಾನವ ಸಂಪನ್ಮೂಲ ಅಭಿವೃದ್ದಿ ಯೋಜನೆಯ ಭಾಗವಾಗಿದ್ದಾರೆ. ಅವರಲ್ಲಿ ಕಳೆದ ಬಾರಿ ಆರೋಗ್ಯ ಕ್ಷೇತ್ರಕ್ಕೆ ಆಯ್ಕೆ ಮಾಡಿದ 13 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ಕೂಡ ಸಾಧನೆ ಮಾಡಿದ್ದಾರೆ. ಉಳಿದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ತಜ್ಞರಾಗುವ ಅಧ್ಯಯನದಲ್ಲಿದ್ದಾರೆ. ಮುಖ್ಯವಾಗಿ 12 ಕೌನ್ಸಿಲರ್ ಗಳು, 70 ಸರಕಾರಿ ಉಧ್ಯೋಗಕ್ಕೆ ತರಭೇತಿ ಪಡೆಯುತ್ತಿರುವವರು, 20 ಪ್ರೊಫೇಸರ್ ಆಗಲು ಅಧ್ಯಯನದಲ್ಲಿ ಇರುವವರು, 8 ಕಾನೂನು ವಿದ್ಯಾರ್ಥಿಗಳು, 30 ಇಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದಾರೆ. ಇನ್ನುಳಿದಂತೆ ಜಾಗತಿಕ ಬೇಡಿಕೆಯ ಕ್ಷೇತ್ರದಲ್ಲಿ ಸೆಂಟರಿನ ವಿದ್ಯಾರ್ಥಿಗಳು ರಾಜ್ಯ, ದೇಶ, ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಸೆಂಟರಿನ ಎರಡನೇ ವರ್ಷದ ಅವಧಿಗೆ 25 ವಿದ್ಯಾರ್ಥಿಗಳನ್ನು ನೀಟ್ ಕೋಚಿಂಗ್ ಗೆ ಸೇರಿಸಲಾಗಿದೆ. ಅವರನ್ನು ಶಾಹೀನ್ ಬೀದರ್, ಶಾಹೀನ್ ಫಾಲ್ಕನ್ ಬೆಂಗಳೂರು, ಆಕಾಶ್ ಮಂಗಳೂರು, ಎಕ್ಸಲೆಂಟ್ ಗೆ ಸೇರಿಸಿ ನೀಟ್ ಕೋಚಿಂಗ್ ನೀಡಲಾಗುತ್ತಿದೆ.
*ಸೆಂಟರಿನಲ್ಲಿ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ಮೊನಿಟರಿಂಗ್ ನಲ್ಲಿ ಇರುವ 3 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್ ಗೆ ಅರ್ಹತೆ ಪಡೆದಿದ್ದಾರೆ. ಇವರೂ ಕೂಡ ಸೆಂಟರಿನ ಯೋಜನೆಯಲ್ಲಿ ಭಾಗವಹಿಸುವುದಾಗಿ ಸಮ್ಮತಿಸಿರುವುದು ನಮ್ಮ ಸಮುದಾಯದ ಯುವ ಪೀಳಿಗೆಯಲ್ಲಿರುವ ಹೃದತವಂತಿಕೆಗೆ ಸಾಕ್ಷಿ. ನಾವು ಈ ಯುವ ಪೀಳಿಗೆಯೊಂದಿಗೆ ಸಮಾಲೋಚಿಸಿಲ್ಲ, ಅವರನ್ನು ಜೊತೆ ಸೇರಿಸಿಲ್ಲ. ಅವರಿಗೆ ಅವಕಾಶ ನೀಡಿಲ್ಲ. ಹಾಗಾಗಿ ಅವರು ಅವರದೇ ಪ್ರಪಂಚದಲ್ಲಿದ್ದಾರೆ. ಈಗ ಕಮ್ಯೂನಿಟಿ ಸೆಂಟರ್ ಅವರ ಆಲೋಚನೆ, ಚಿಂತನೆ ಮತ್ತು ಕಲ್ಪನೆಗಳನ್ನು ಸಾಕಾರಗೊಳಿಸಲು ಮುಕ್ತವಾದ ವೇದಿಕೆಯನ್ನು ಕಲ್ಪಿಸಿದೆ.*
ಈ ಬಾರಿ ನೀಟ್ ಬರೆದ ವಿದ್ಯಾರ್ಥಿಗಳಿಗೆ ಮಂಗಳೂರಿನ ಖ್ಯಾತ ಕೆರಿಯರ್ ಕೌನ್ಸಿಲರ್ ಉಮರ್ ಯು.ಎಚ್, ಬೀದರ್ ಶಾಹೀನ್ ನ ಡಾ.ಅಬ್ದುಲ್ ಖದೀರ್ ಸಾಬ್, ಕಮ್ಯೂನಿಟಿ ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಲ್ಯ, ಅಲ್ ಮುಝೈನ್ ನ ಝಕರಿಯಾ ಹಾಜಿ ಜೋಕಟ್ಟೆ , ಇಕ್ಬಾಲ್ ಮೂಡಬಿದ್ರೆ, ರಫೀಕ್ ಮಾಸ್ಟರ್ ಇವರ ಸಹಯೋಗದ ಸಹಕಾರದಿಂದ ಈ ಸಾಧನೆ ಮಾಡುವ ಅವಕಾಶ ಸಿಕ್ಕಿತ್ತು.
*ನೀಟ್ ನಲ್ಲಿ ಈ ಬಾರಿ ಎಂ.ಬಿ.ಬಿ.ಎಸ್ ಅರ್ಹತೆ ಪಡೆದ ಮೂರು ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಅವಕಾಶ ವಂಚಿತರಾಗಿದ್ದವರು. ಅವರಲ್ಲಿ ಬೌದ್ಧಿಕ ಸಾಮರ್ಥ್ಯ, ಅರ್ಹತೆ, ಆಸಕ್ತಿ ಇದ್ದರೂ ಅವರ ಗುರಿ ತಲುಪುವುದು ಅಸಾಧ್ಯವಾಗಿತ್ತು. ಈ ಸಂದರ್ಭ ಕಮ್ಯೂನಿಟಿ ಸೆಂಟರ್ ಕೇಂದ್ರೀಕೃತ ಪದ್ದತಿಯನ್ನು ರೂಪಿಸಿ ಸಮುದಾಯಕ್ಕೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿ ಈ ವಿದ್ಯಾರ್ಥಿಗಳಿಗೆ ನೆರವಾಗಿತ್ತು. ನಾವು ಕೇಂದ್ರೀಕೃತ ಪದ್ಧತಿಯಲ್ಲಿ ದುಡಿದರೆ 100% ಫಲಿತಾಂಶ ಪಡೆಯಬಹುದು ಎನ್ನುವುದಕ್ಕೆ ಇದು ಒಂದು ಉದಾಹರಣೆ.
ನಾವಿಲ್ಲಿ ಕೌನ್ಸಿಲರ್ ಗಳು, ಸಮುದಾಯ ಸೇವಾಸಕ್ತರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಒಂದು ತಂಡವಾಗಿ ದುಡಿದ ಪ್ರಯತ್ನ ಈ ಫಲಿತಾಂಶ ಪಡೆಯಲು ನಮ್ಮಿಂದ ಸಾಧ್ಯವಾಯಿತು. ಅದಕ್ಕೊಂದು ಉದಾಹರಣೆ ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಪೌಂಡೇಶನ್ ನ ಅಧೀನ ಸಂಸ್ಥೆ ಕಮ್ಯೂನಿಟಿ ಸೆಂಟರಿನ ನೀಟ್ ಸಾಧಕರು ಎಂದು ನಾವು ಅಭಿಮಾನದಿಂದ ಹೇಳಬಹುದು ಎಂದು ಕಮ್ಯುನಿಟಿ ಸೆಂಟರ್ ನ ಹನೀಫ್ ಪುತ್ತೂರು ತಿಳಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.