ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಎರಡು ವರ್ಷದಿಂದ ಕುಂಟುತ್ತಾ ಸಾಗುತ್ತಿರುವ ತೊಕ್ಕೊಟ್ಟು ಕುತ್ತಾರ್ ರಸ್ತೆಯನ್ನು ಶೀಘ್ರ ಅಭಿವೃದ್ಧಿಗೊಳಿಸಬೇಕು ಅಥವಾ ವೈಜ್ಞಾನಿಕವಾಗಿ ತಾತ್ಕಾಲಿಕ ಗುಂಡಿ ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಮಂಗಳೂರು ಕ್ಷೇತ್ರ ಸಮಿತಿ ವತಿಯಿಂದ SDTU ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ರವರ ನೇತ್ರತ್ವದಲ್ಲಿ ಕುತ್ತಾರ್ ನಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ SDTU ಜಿಲ್ಲಾಧ್ಯಕ್ಷ ಝಾಕೀರ್ ಉಳ್ಳಾಲ್ ಇಲ್ಲಿನ ಶಾಸಕರ ಬೇಜವಬ್ದಾರಿಯಿಂದ ಕುತ್ತಾರ್ ಮತ್ತು ತೊಕ್ಕೊಟ್ಟು ಪರಿಸರದ ಜನರು ಗುಂಡಿ ತುಂಬಿದ ರಸ್ತೆಯಿಂದ ದೂಳು ತಿನ್ನುತ್ತಾ ದಿನಕಳೆಯುತ್ತಾ ಇದ್ದಾರೆ ಮೆಡಿಕಲ್ ಕಾಲೇಜ್ ಆಸ್ಪತ್ರೆ ವಿಶ್ವವಿದ್ಯಾನಿಲಯಕ್ಕೆ ಹೋಗುವ ಮುಖ್ಯ ರಸ್ತೆ ಎರಡು ವರ್ಷದಿಂದ ಕುಂಟುತ್ತಾ ಸಾಗುತ್ತಿರುವುದು ವಿಧಾನ ಸಭಾ ಚುನಾವಣೆಗಾಗಿ ಹತ್ತಿರ ಬರುವವರೆಗೂ ಕಾಯುತ್ತಾ ಜನರನ್ನು ಮೂರ್ಖರನ್ನಾಗಿ ಶಾಸಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಚುನಾವಣೆ ಹತ್ತಿರ ಬರುವವರೆಗೂ ಕ್ರೆಡಿಟ್ ಪಡೆಯಲು ಕಾಮಗಾರಿಯನ್ನು ನಿಧಾನ ಗತಿಯಲ್ಲಿ ಸಾಗುವಂತೆ ಮಾಡಲಾಗಿದೆ ಆದರೆ ಇವರ ರಾಜಕೀಯ ತೆವಳಿಗಾಗಿ ಜನಸಾಮಾನ್ಯರು ಆಟೋ ರಿಕ್ಷಾ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಮುಂದಿನ ಹದಿನೈದು ದಿನಗಳಲ್ಲಿ ಈ ರಸ್ತೆಯನ್ನು ದುರಸ್ಥಿಗೊಳಿಸದೇ ಇದ್ದರೆ ಮುಖ್ಯ ರಸ್ತೆ ಬಂದ್ ಮಾಡಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಆಶ್ರಫ್ ಕೆಸಿರೋಡ್ ಈ ಸಂದರ್ಭದಲ್ಲಿ ಮಾತನಾಡಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.