ತ್ರಿಶೂರ್ (ವಿಶ್ವ ಕನ್ನಡಿಗ ನ್ಯೂಸ್) : ಕೈಪಮಂಗಲಂನ ಪನಂಬಿಕುನ್ನು ಎಂಬಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ. ವಯನಾಡಿನ ಮನಂತವಾಡಿ ನಿವಾಸಿ ನಿಜಾಮ್ (28) ಮೃತಪಟ್ಟವರು.
ಗಾಯಾಳುಗಳನ್ನು ಮನಂತವಾಡಿಯ ಕೊಟ್ಟರೈ ಹೌಸ್ ನ ಜಾಫರ್ (30), ಪೊನ್ನನ್ ಹೌಸ್ ನ ಮೆಹರೂಫ್ (32), ಸೀದಿ ಹೌಸ್ ನ ಸಾದಿಕ್ (30) ಮತ್ತು ಮೊಂಪರನ್ ಹೌಸ್ ನ ಫೈಜ್ (23) ಎಂದು ಗುರುತಿಸಲಾಗಿದೆ. ಮನಂತವಾಡಿಯಿಂದ ಎರ್ನಾಕುಲಂಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.